PHPWord

 

 

العَقِيدَةُ الصَّحِيْحَةُ وَمَا يُضَادُّهَا

 

ಸರಿಯಾದ ವಿಶ್ವಾಸ (ಅಕೀದ) ಮತ್ತು ಅದಕ್ಕೆ ವಿರುದ್ಧವಾದದ್ದು

 

 

 

 

 

 

 

لِسَمَاحَةِ الشَّيْخِ العَلَّامَةِ

عَبْدِ العَزِيزِ بْنِ عَبْدِ اللهِ بْنِ بَازٍ

رَحِمَهُ اللهُ

 

ಲೇಖಕರು: ಗೌರವಾನ್ವಿತ ಶೈಖ್

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್

 

 


بِسْمِ اللهِ الرَّحمَنِ الرَّحِيمِ

ಮೊದಲನೆಯ ಸಂದೇಶ:

ಸರಿಯಾದ ವಿಶ್ವಾಸ (ಅಕೀದ) ಮತ್ತು ಅದಕ್ಕೆ ವಿರುದ್ಧವಾದದ್ದು

ಅಲ್ಲಾಹನೊಬ್ಬನಿಗೇ ಸರ್ವಸ್ತುತಿಗಳು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಇಲ್ಲವೋ ಅವರ (ಪ್ರವಾದಿ ಮುಹಮ್ಮದ್) ಮೇಲೆ, ಅವರ ಕುಟುಂಬ ಮತ್ತು ಸಹಚರರ ಮೇಲೆ ಶಾಂತಿ ಹಾಗೂ ಶುಭಾಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಸರಿಯಾದ ವಿಶ್ವಾಸವು (ಅಕೀದ) ಇಸ್ಲಾಂ ಧರ್ಮದ ಮೂಲ ಹಾಗೂ ಅದರ ಅಡಿಪಾಯವಾಗಿರುವುದರಿಂದ, ಈ ವಿಷಯದ ಬಗ್ಗೆ ಮಾತನಾಡುವುದು, ಅದರ ವಿವರಣೆ ಮತ್ತು ಸ್ಪಷ್ಟನೆಯ ಬಗ್ಗೆ ಬರೆಯುವುದು ಮತ್ತು (ಕೃತಿಗಳನ್ನು) ರಚಿಸುವುದು ಬಹಳ ಮುಖ್ಯವೆಂದು ನನಗೆ ಅನಿಸಿದೆ.

ಕುರ್‌ಆನ್ ಮತ್ತು ಸುನ್ನತ್ತಿನಿಂದ ಪಡೆದ ಧಾರ್ಮಿಕ ಪುರಾವೆಗಳಿಂದ ತಿಳಿದುಬರುವ ವಿಷಯವೇನೆಂದರೆ, ಕರ್ಮಗಳು ಮತ್ತು ಮಾತುಗಳು ಸರಿಯಾದ ವಿಶ್ವಾಸದಿಂದ (ಅಕೀದದಿಂದ) ಹೊರಹೊಮ್ಮಿದರೆ ಮಾತ್ರ ಅವು ಸಿಂಧುವಾಗುತ್ತವೆ ಮತ್ತು ಸ್ವೀಕರಿಸಲ್ಪಡುತ್ತವೆ. ಒಂದು ವೇಳೆ ವಿಶ್ವಾಸವು (ಅಕೀದ) ಸರಿಯಾಗಿಲ್ಲದಿದ್ದರೆ, ಅದರಿಂದ ಉಂಟಾಗುವ ಕರ್ಮಗಳು ಮತ್ತು ಮಾತುಗಳು ಅಸಿಂಧುವಾಗುತ್ತವೆ. ಅಲ್ಲಾಹು ಹೇಳುತ್ತಾನೆ:

﴿...وَمَن يَكۡفُرۡ بِٱلۡإِيمَٰنِ فَقَدۡ حَبِطَ عَمَلُهُۥ وَهُوَ فِي ٱلۡأٓخِرَةِ مِنَ ٱلۡخَٰسِرِينَ﴾

“ಯಾರು ಸತ್ಯವಿಶ್ವಾಸವನ್ನು (ಈಮಾನ್) ನಿಷೇಧಿಸುತ್ತಾರೋ ಅವರ ಕರ್ಮಗಳು ವ್ಯರ್ಥವಾಗುತ್ತವೆ, ಮತ್ತು ಅವರು ಪರಲೋಕದಲ್ಲಿ ನಷ್ಟ ಅನುಭವಿಸುವವರಲ್ಲಿ ಸೇರುತ್ತಾರೆ.” [ಅಲ್-ಮಾಇದ: 5]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَلَقَدۡ أُوحِيَ إِلَيۡكَ وَإِلَى ٱلَّذِينَ مِن قَبۡلِكَ لَئِنۡ أَشۡرَكۡتَ لَيَحۡبَطَنَّ عَمَلُكَ وَلَتَكُونَنَّ مِنَ ٱلۡخَٰسِرِينَ 65﴾

“ಮತ್ತು (ಓ ಪ್ರವಾದಿಯವರೇ,) ನಿಮ್ಮೆಡೆಗೆ ಮತ್ತು ನಿಮಗಿಂತ ಹಿಂದಿನವರ (ಪ್ರವಾದಿಗಳ) ಕಡೆಗೆ ಈಗಾಗಲೇ ವಹೀ (ದೇವವಾಣಿ) ಕಳುಹಿಸಲಾಗಿರುವುದು ಏನೆಂದರೆ, ‘ನೀವು ಒಂದು ವೇಳೆ ಶಿರ್ಕ್ ಮಾಡಿದರೆ, ನಿಮ್ಮ ಕರ್ಮಗಳು ಖಂಡಿತವಾಗಿಯೂ ವ್ಯರ್ಥವಾಗುತ್ತವೆ ಮತ್ತು ನೀವು ನಷ್ಟ ಅನುಭವಿಸುವವರಲ್ಲಿ ಸೇರುವಿರಿ. [ಅಝ್ಝುಮರ್: 65]

ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ಅಲ್ಲಾಹನ ಸುಸ್ಪಷ್ಟ ಗ್ರಂಥ (ಕುರ್‌ಆನ್) ಮತ್ತು ಅವನ ಸಂದೇಶವಾಹಕರ (ಸ) ಸುನ್ನತ್ ಸೂಚಿಸಿರುವಂತೆ, ಸರಿಯಾದ ವಿಶ್ವಾಸವು ಆರು ವಿಷಯಗಳಲ್ಲಿ ಅಡಕವಾಗಿದೆ. ಅವು ಯಾವುವೆಂದರೆ: ಅಲ್ಲಾಹನಲ್ಲಿ ವಿಶ್ವಾಸವಿಡುವುದು, ಅವನ ದೇವದೂತರುಗಳಲ್ಲಿ ವಿಶ್ವಾಸವಿಡುವುದು, ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು, ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು, ಅಂತ್ಯದಿನದಲ್ಲಿ ವಿಶ್ವಾಸವಿಡುವುದು, ಮತ್ತು ವಿಧಿಯ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು. ಈ ಆರು ವಿಷಯಗಳು ಸರಿಯಾದ ವಿಶ್ವಾಸದ ಮೂಲತತ್ವಗಳಾಗಿದ್ದು, ಇವುಗಳೊಂದಿಗೆ ಅಲ್ಲಾಹು ತನ್ನ ಪವಿತ್ರ ಗ್ರಂಥವನ್ನು ಅವತೀರ್ಣಗೊಳಿಸಿದನು ಮತ್ತು ಇವುಗಳೊಂದಿಗೆ ಅಲ್ಲಾಹು ತನ್ನ ಸಂದೇಶವಾಹಕರಾದ ಮುಹಮ್ಮದ್ (ಸ) ರನ್ನು ಕಳುಹಿಸಿದನು.

ಈ ಆರು ಮೂಲತತ್ವಗಳ ಬಗ್ಗೆ ಪವಿತ್ರ ಕುರ್‌ಆನ್ ಮತ್ತು ಸಹೀಹ್ (ದೃಢೀಕೃತ) ಸುನ್ನತ್‌ನಲ್ಲಿ ಹಲವಾರು ಪುರಾವೆಗಳು ಬಂದಿವೆ. ಉದಾಹರಣೆಗೆ ಈ ಕೆಳಗಿನ ಪುರಾವೆಗಳು:

ಮೊದಲನೆಯದಾಗಿ: ಕುರ್‌ಆನ್‌ನಲ್ಲಿ ಬಂದ ಪುರಾವೆಗಳು; ಅವುಗಳಲ್ಲಿ ಕೆಲವು ಹೀಗಿವೆ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿لَّيۡسَ ٱلۡبِرَّ أَن تُوَلُّواْ وُجُوهَكُمۡ قِبَلَ ٱلۡمَشۡرِقِ وَٱلۡمَغۡرِبِ وَلَٰكِنَّ ٱلۡبِرَّ مَنۡ ءَامَنَ بِٱللَّهِ وَٱلۡيَوۡمِ ٱلۡأٓخِرِ وَٱلۡمَلَٰٓئِكَةِ وَٱلۡكِتَٰبِ وَٱلنَّبِيِّـۧنَ...﴾

“ನೀವು ನಿಮ್ಮ ಮುಖಗಳನ್ನು ಪೂರ್ವಕ್ಕಾಗಲೀ ಪಶ್ಚಿಮಕ್ಕಾಗಲೀ ತಿರುಗಿಸುವುದರಲ್ಲಿ ಯಾವುದೇ ಪುಣ್ಯವಿಲ್ಲ. ಆದರೆ ಪುಣ್ಯವಂತರು ಯಾರೆಂದರೆ, ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ದೇವದೂತರುಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಟ್ಟವರು.”

[ಅಲ್-ಬಕರ: 177].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿ءَامَنَ ٱلرَّسُولُ بِمَآ أُنزِلَ إِلَيۡهِ مِن رَّبِّهِۦ وَٱلۡمُؤۡمِنُونَۚ كُلٌّ ءَامَنَ بِٱللَّهِ وَمَلَٰٓئِكَتِهِۦ وَكُتُبِهِۦ وَرُسُلِهِۦ لَا نُفَرِّقُ بَيۡنَ أَحَدٖ مِّن رُّسُلِهِ...﴾

“ಸಂದೇಶವಾಹಕರು ತಮ್ಮ ಪರಿಪಾಲಕನಿಂದ ತಮಗೆ ಅವತೀರ್ಣವಾದುದರಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳೂ ಸಹ (ವಿಶ್ವಾಸವಿಟ್ಟಿದ್ದಾರೆ). ಅವರೆಲ್ಲರೂ ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ನಾವು ಅವನ ಸಂದೇಶವಾಹಕರುಗಳಲ್ಲಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ (ಎಂದು ಅವರು ಹೇಳುತ್ತಾರೆ).” [ಅಲ್-ಬಕರ: 285].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلَّذِينَ ءَامَنُوٓاْ ءَامِنُواْ بِٱللَّهِ وَرَسُولِهِۦ وَٱلۡكِتَٰبِ ٱلَّذِي نَزَّلَ عَلَىٰ رَسُولِهِۦ وَٱلۡكِتَٰبِ ٱلَّذِيٓ أَنزَلَ مِن قَبۡلُۚ وَمَن يَكۡفُرۡ بِٱللَّهِ وَمَلَٰٓئِكَتِهِۦ وَكُتُبِهِۦ وَرُسُلِهِۦ وَٱلۡيَوۡمِ ٱلۡأٓخِرِ فَقَدۡ ضَلَّ ضَلَٰلَۢا بَعِيدًا 136﴾

“ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಸಂದೇಶವಾಹಕರ ಮೇಲೆ ಅವನು ಅವತೀರ್ಣಗೊಳಿಸಿದ ಗ್ರಂಥದಲ್ಲಿ ಮತ್ತು ಅವನು ಹಿಂದೆ (ಇತರ ಪ್ರವಾದಿಗಳಿಗೆ) ಅವತೀರ್ಣಗೊಳಿಸಿದ ಗ್ರಂಥದಲ್ಲಿ ವಿಶ್ವಾಸವಿಡಿ. ಮತ್ತು ಯಾರು ಅಲ್ಲಾಹನನ್ನು, ಅವನ ದೇವದೂತರುಗಳನ್ನು, ಅವನ ಗ್ರಂಥಗಳನ್ನು, ಅವನ ಸಂದೇಶವಾಹಕರುಗಳನ್ನು ಮತ್ತು ಅಂತ್ಯದಿನವನ್ನು ನಿಷೇಧಿಸುತ್ತಾರೋ, ಅವರು ಖಂಡಿತವಾಗಿಯೂ ಬಹಳ ದೂರದ ದುರ್ಮಾರ್ಗದಲ್ಲಿ ದಾರಿತಪ್ಪಿದ್ದಾರೆ.” [ಅನ್ನಿಸಾ: 136].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿أَلَمۡ تَعۡلَمۡ أَنَّ ٱللَّهَ يَعۡلَمُ مَا فِي ٱلسَّمَآءِ وَٱلۡأَرۡضِۚ إِنَّ ذَٰلِكَ فِي كِتَٰبٍۚ إِنَّ ذَٰلِكَ عَلَى ٱللَّهِ يَسِيرٞ 70﴾

“ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನೆಲ್ಲಾ ಅಲ್ಲಾಹನು ತಿಳಿದಿದ್ದಾನೆಂದು ನಿಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದು ಒಂದು ಗ್ರಂಥದಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸುಲಭವಾಗಿದೆ.” [ಅಲ್-ಹಜ್ಜ್: 70].

ಎರಡನೆಯದಾಗಿ: ಸುನ್ನತ್‌ನಲ್ಲಿ ಬಂದ ಪುರಾವೆಗಳು; ಅವುಗಳಲ್ಲಿ ಕೆಲವು ಹೀಗಿವೆ: ಇಮಾಮ್ ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ಅಮೀರುಲ್ ಮುಅ್‌ಮಿನೀನ್ ಉಮರ್ ಬಿನ್ ಖತ್ತಾಬ್ (ರ) ರಿಂದ ವರದಿ ಮಾಡಿದ ಪ್ರಸಿದ್ಧ ಸಹೀಹ್ ಹದೀಸ್‌ನಲ್ಲಿರುವಂತೆ ಜಿಬ್ರೀಲ್ (ಅ) ರವರು ಪ್ರವಾದಿ (ಸ) ರಲ್ಲಿ ಈಮಾನ್ (ಸತ್ಯವಿಶ್ವಾಸ) ಬಗ್ಗೆ ಕೇಳಿದರು. ಆಗ ಅವರು ಉತ್ತರಿಸಿದರು:

«الإِيمَانُ أَنْ تُؤْمِنَ بِاللَّهِ، وَمَلَائِكَتِهِ، وَكُتُبِهِ، وَرُسُلِهِ، وَاليَوْمِ الآخِرِ، وَتُؤْمِنَ بِالقَدَرِ خَيْرِهِ وَشَرِّهِ».

“ಈಮಾನ್ ಎಂದರೆ ನೀವು ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಮತ್ತು ವಿಧಿಯ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು.”1 ಹದೀಸ್, ಇದನ್ನು ಬುಖಾರಿ ಮತ್ತು ಮುಸ್ಲಿಂ ರವರು ಅಬೂ ಹುರೈರಾ (ರ) ರಿಂದ ಸ್ವಲ್ಪ ವ್ಯತ್ಯಾಸದೊಂದಿಗೆ ವರದಿ ಮಾಡಿದ್ದಾರೆ.

ಮುಸಲ್ಮಾನನು ಅಲ್ಲಾಹನಿಗೆ ಸಂಬಂಧಿಸಿದ ವಿಷಯಗಳಲ್ಲಿ, ಪರಲೋಕದ ವಿಷಯದಲ್ಲಿ ಮತ್ತು ಅಲ್ಲಾಹನು ಮತ್ತು ಅವನ ಸಂದೇಶವಾಹಕರು (ಸ) ತಿಳಿಸಿದ ಇತರೆ ಅದೃಶ್ಯ ವಿಷಯಗಳಲ್ಲಿ ನಂಬಬೇಕಾದ ಮತ್ತು ವಿಶ್ವಾಸವಿಡಬೇಕಾದ ಎಲ್ಲವೂ ಈ ಆರು ಮೂಲತತ್ವಗಳಿಂದ ಕವಲೊಡೆಯುತ್ತವೆ.

ಈ ಆರು ಮೂಲತತ್ವಗಳ ವಿವರಣೆ ಈ ಕೆಳಗಿನಂತಿದೆ:

ಮೊದಲನೆಯ ಮೂಲತತ್ವ: ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು

ಇದು ಹಲವಾರು ವಿಷಯಗಳನ್ನು ಒಳಗೊಂಡಿದೆ, ಅವುಗಳಲ್ಲಿ ಕೆಲವು ಹೀಗಿವೆ: ಅವನೊಬ್ಬನೇ ಸತ್ಯ ದೇವನು ಮತ್ತು ಇತರ ಎಲ್ಲರ ಹೊರತಾಗಿ ಅವನು ಮಾತ್ರ ಆರಾಧನೆಗೆ ಅರ್ಹನು ಎಂದು ವಿಶ್ವಾಸವಿಡುವುದು. ಏಕೆಂದರೆ ಅವನು ಮನುಷ್ಯರ ಸೃಷ್ಟಿಕರ್ತನು, ಅವರಿಗೆ ಉಪಕಾರ ಮಾಡುವವನು, ಅವರ ಪಾಲನೆ-ಪೋಷಣೆಯನ್ನು ನಿರ್ವಹಿಸುವವನು, ಅವರ ರಹಸ್ಯ ಮತ್ತು ಬಹಿರಂಗವನ್ನು ತಿಳಿದಿರುವವನು, ಮತ್ತು ಅವರಲ್ಲಿ ವಿಧೇಯರಾದವರಿಗೆ ಪ್ರತಿಫಲ ನೀಡಲು ಹಾಗೂ ಅವಿಧೇಯರಾದವರನ್ನು ಶಿಕ್ಷಿಸಲು ಶಕ್ತನಾಗಿರುವವನು ಆಗಿದ್ದಾನೆ.

ಈ ಆರಾಧನೆಗಾಗಿಯೇ ಅಲ್ಲಾಹು ಜಿನ್ನ್ ಮತ್ತು ಮಾನವರನ್ನು ಸೃಷ್ಟಿಸಿದನು ಮತ್ತು ಅದನ್ನೇ ಅವರಿಗೆ ಆಜ್ಞಾಪಿಸಿದನು. ಅಲ್ಲಾಹು ಹೇಳುತ್ತಾನೆ:

﴿وَمَا خَلَقۡتُ ٱلۡجِنَّ وَٱلۡإِنسَ إِلَّا لِيَعۡبُدُونِ 56 مَآ أُرِيدُ مِنۡهُم مِّن رِّزۡقٖ وَمَآ أُرِيدُ أَن يُطۡعِمُونِ 57 إِنَّ ٱللَّهَ هُوَ ٱلرَّزَّاقُ ذُو ٱلۡقُوَّةِ ٱلۡمَتِينُ 58﴾

“ಮತ್ತು ನಾನು ಜಿನ್ನ್‌ಗಳನ್ನೂ ಮಾನವರನ್ನೂ ನನ್ನನ್ನು ಆರಾಧಿಸುವುದಕ್ಕಲ್ಲದೆ ಸೃಷ್ಟಿಸಿಲ್ಲ.

ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಆಹಾರ ನೀಡಬೇಕೆಂದೂ ನಾನು ಬಯಸುವುದಿಲ್ಲ.

ನಿಶ್ಚಯವಾಗಿಯೂ ಅಲ್ಲಾಹನೇ ಆಹಾರ ನೀಡುವವನು, ಮಹಾಶಕ್ತಿವಂತನು, ಬಲಿಷ್ಠನು.” [ಅದ್ದಾರಿಯಾತ್: 56-58].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلنَّاسُ ٱعۡبُدُواْ رَبَّكُمُ ٱلَّذِي خَلَقَكُمۡ وَٱلَّذِينَ مِن قَبۡلِكُمۡ لَعَلَّكُمۡ تَتَّقُونَ 21 ٱلَّذِي جَعَلَ لَكُمُ ٱلۡأَرۡضَ فِرَٰشٗا وَٱلسَّمَآءَ بِنَآءٗ وَأَنزَلَ مِنَ ٱلسَّمَآءِ مَآءٗ فَأَخۡرَجَ بِهِۦ مِنَ ٱلثَّمَرَٰتِ رِزۡقٗا لَّكُمۡۖ فَلَا تَجۡعَلُواْ لِلَّهِ أَندَادٗا وَأَنتُمۡ تَعۡلَمُونَ 22﴾

“ಓ ಮಾನವರೇ, ನಿಮ್ಮನ್ನು ಮತ್ತು ನಿಮಗಿಂತ ಹಿಂದಿನವರನ್ನು ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ, ಇದರಿಂದ ನೀವು ದೇವಭಯವುಳ್ಳವರಾಗಬಹುದು.

ಅವನೇ ನಿಮಗಾಗಿ ಭೂಮಿಯನ್ನು ಹಾಸಿಗೆಯನ್ನಾಗಿಯೂ ಮತ್ತು ಆಕಾಶವನ್ನು ಛಾವಣಿಯನ್ನಾಗಿಯೂ ಮಾಡಿದನು, ಮತ್ತು ಆಕಾಶದಿಂದ ನೀರನ್ನು ಸುರಿಸಿ ಅದರ ಮೂಲಕ ನಿಮಗಾಗಿ ಹಣ್ಣುಗಳನ್ನು ಆಹಾರವಾಗಿ ಹೊರತಂದನು; ಆದ್ದರಿಂದ ನೀವು ತಿಳಿದಿರುವವರಾಗಿಯೂ ಅಲ್ಲಾಹನಿಗೆ ಸರಿಸಾಟಿಗಳನ್ನು ಕಲ್ಪಿಸಬೇಡಿ.”

[ಅಲ್-ಬಕರ: 21-22].

ಈ ಸತ್ಯವನ್ನು ಸ್ಪಷ್ಟಪಡಿಸಲು, ಅದರ ಕಡೆಗೆ (ಜನರನ್ನು) ಆಹ್ವಾನಿಸಲು ಮತ್ತು ಅದಕ್ಕೆ ವಿರುದ್ಧವಾದುದರ ಬಗ್ಗೆ (ಜನರಿಗೆ) ಎಚ್ಚರಿಸಲು ಅಲ್ಲಾಹು ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَلَقَدۡ بَعَثۡنَا فِي كُلِّ أُمَّةٖ رَّسُولًا أَنِ ٱعۡبُدُواْ ٱللَّهَ وَٱجۡتَنِبُواْ ٱلطَّٰغُوتَ...﴾

“ಮತ್ತು ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯದಲ್ಲೂ ಒಬ್ಬ ಸಂದೇಶವಾಹಕನನ್ನು ಕಳುಹಿಸಿದ್ದೇವೆ (ಈ ಆದೇಶದೊಂದಿಗೆ): ‘ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್‌ನಿಂದ (ಮಿಥ್ಯದೇವರುಗಳಿಂದ) ದೂರವಿರಿ’.” [ಅನ್ನಹ್ಲ್: 36].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَآ أَرۡسَلۡنَا مِن قَبۡلِكَ مِن رَّسُولٍ إِلَّا نُوحِيٓ إِلَيۡهِ أَنَّهُۥ لَآ إِلَٰهَ إِلَّآ أَنَا۠ فَٱعۡبُدُونِ25﴾

“ಮತ್ತು (ಓ ಪ್ರವಾದಿಯೇವರೇ) ನಿಮಗಿಂತ ಮೊದಲು ನಾವು ಯಾವುದೇ ಸಂದೇಶವಾಹಕನನ್ನು ‘ನನ್ನ ಹೊರತು ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನೇ ಆರಾಧಿಸಿರಿ’ ಎಂಬ ವಹೀ (ದೇವವಾಣಿ)ಯನ್ನು ನೀಡದೆ ಕಳುಹಿಸಿಲ್ಲ.” [ಅಲ್-ಅಂಬಿಯಾ: 25]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿الر كِتَابٌ أُحْكِمَتْ آيَاتُهُ ثُمَّ فُصِّلَتْ مِنْ لَدُنْ حَكِيمٍ خَبِيرٍ1 أَلَّا تَعْبُدُوا إِلَّا اللَّهَ إِنَّنِي لَكُمْ مِنْهُ نَذِيرٌ وَبَشِيرٌ2﴾

“ಅಲಿಫ್-ಲಾಮ್-ರಾ. ಇದೊಂದು ಗ್ರಂಥ, ಇದರ ವಚನಗಳನ್ನು ದೃಢಪಡಿಸಲಾಗಿದೆ, ನಂತರ ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಿಂದ (ಅಲ್ಲಾಹನಿಂದ) ವಿವರಿಸಲಾಗಿದೆ.

ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬೇಡಿ ಎಂದು. ನಿಶ್ಚಯವಾಗಿಯೂ ನಾನು ಅವನ ಕಡೆಯಿಂದ ನಿಮಗೆ ಎಚ್ಚರಿಕೆ ನೀಡುವವನು ಮತ್ತು ಶುಭವಾರ್ತೆ ನೀಡುವವನಾಗಿದ್ದೇನೆ.”

[ಹೂದ್: 1-2].

ಈ ಆರಾಧನೆಯ ವಾಸ್ತವಿಕತೆಯೇನೆಂದರೆ: ಪ್ರಾರ್ಥನೆ (ದುಆ), ಭಯ, ನಿರೀಕ್ಷೆ, ನಮಾಝ್, ಉಪವಾಸ, ಬಲಿ, ಹರಕೆ ಮತ್ತು ಇತರ ಎಲ್ಲಾ ರೀತಿಯ ಆರಾಧನೆಗಳನ್ನು, ಅಲ್ಲಾಹನಿಗೆ ವಿನಮ್ರರಾಗಿ, ಅವನ ಪ್ರತಿಫಲವನ್ನು ಆಶಿಸುತ್ತಾ, ಅವನ ಶಿಕ್ಷೆಗೆ ಹೆದರುತ್ತಾ, ಅವನಿಗೆ ಪರಿಪೂರ್ಣ ಪ್ರೀತಿಯನ್ನು ಹಾಗೂ ಅವನ ಮಹಿಮೆಗೆ ಸಂಪೂರ್ಣ ಅಧೀನತೆಯನ್ನು ಪ್ರಕಟಿಸುತ್ತಾ, ಸರ್ವಶಕ್ತನಾದ ಅವನಿಗೆ ಮಾತ್ರ ಸಂಪೂರ್ಣವಾಗಿ ಸಮರ್ಪಿಸುವುದು.

ಪವಿತ್ರ ಕುರ್‌ಆನ್ ಅನ್ನು ಆಳವಾಗಿ ಅಧ್ಯಯನ ಮಾಡುವವರು, ಅದರ ಹೆಚ್ಚಿನ ಭಾಗವು ಈ ಮಹಾನ್ ಮೂಲತತ್ವದ ಬಗ್ಗೆಯೇ ಅವತೀರ್ಣಗೊಂಡಿದೆ ಎಂದು ಕಂಡುಕೊಳ್ಳುತ್ತಾರೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ فَاعْبُدِ اللَّهَ مُخْلِصًا لَهُ الدِّينَ 2 أَلَا لِلَّهِ الدِّينُ الْخَالِصُ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ3﴾

“ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿಮಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ಅಲ್ಲಾಹನಿಗೆ ಧರ್ಮವನ್ನು ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಿರಿ.

ನಿಷ್ಕಳಂಕವಾದ ಧರ್ಮವು ಅಲ್ಲಾಹನಿಗೇ ಸೇರಿದೆ. ಮತ್ತು ಯಾರು ಅವನನ್ನು ಬಿಟ್ಟು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡಿದ್ದಾರೋ (ಅವರು ಹೇಳುತ್ತಾರೆ): ‘ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸಲು ಮಾತ್ರ ನಾವು ಅವರನ್ನು ಆರಾಧಿಸುತ್ತೇವೆ.’ ನಿಶ್ಚಯವಾಗಿಯೂ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಅಲ್ಲಾಹು ಅವರ ನಡುವೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳುಗಾರ ಮತ್ತು ಕೃತಘ್ನನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ.” [ಅಝ್ಝುಮರ್: 2-3].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَقَضَىٰ رَبُّكَ أَلَّا تَعۡبُدُوٓاْ إِلَّآ إِيَّاهُ...﴾

“ಮತ್ತು ನಿಮ್ಮ ಪರಿಪಾಲಕನು (ಅಲ್ಲಾಹು) ವಿಧಿಸಿದ್ದಾನೆ, ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂದು.” [ಅಲ್-ಇಸ್ರಾಅ್: 23]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿فَٱدۡعُواْ ٱللَّهَ مُخۡلِصِينَ لَهُ ٱلدِّينَ وَلَوۡ كَرِهَ ٱلۡكَٰفِرُونَ14﴾

“ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ದ್ವೇಷಿಸಿದರೂ ಸಹ.” [ಅಲ್-ಗಾಫಿರ್: 14].

ಅದೇ ರೀತಿ, ಪ್ರವಾದಿ (ಸ) ರವರ ಸುನ್ನತ್ತನ್ನು ಆಳವಾಗಿ ಅಧ್ಯಯನ ಮಾಡುವವರು, ಅವರು ಈ ಮಹಾನ್ ಮೂಲತತ್ವಕ್ಕೆ ಅದರಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ಕಾಣುವರು. ಅವುಗಳಲ್ಲಿ ಒಂದು ಹೀಗಿದೆ: ಬುಖಾರಿ ಮತ್ತು ಮುಸ್ಲಿಂ ರವರು ಮುಆದ್ (ರ) ರಿಂದ ವರದಿ ಮಾಡಿದ ಹದೀಸಿನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«حَقُّ اللهِ عَلَى العِبَادِ أَن يَعْبُدُوهُ وَلَا يُشْرِكُوا بِهِ شَيْئًا».

“ದಾಸರ ಮೇಲೆ ಅಲ್ಲಾಹನಿಗಿರುವ ಹಕ್ಕು ಏನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಯಾವುದನ್ನೂ ಸಹಭಾಗಿಯನ್ನಾಗಿ ಮಾಡಬಾರದು.”2.

ಅಲ್ಲಾಹನಲ್ಲಿರುವ ವಿಶ್ವಾಸವು, ಅವನು ತನ್ನ ದಾಸರ ಮೇಲೆ ಕಡ್ಡಾಯಗೊಳಿಸಿದ ಎಲ್ಲಾ ವಿಷಯಗಳಲ್ಲಿ ವಿಶ್ವಾಸವಿಡುವುದನ್ನು ಒಳಗೊಂಡಿದೆ; ಇಸ್ಲಾಮಿನ ಐದು ಬಾಹ್ಯ ಆಧಾರಸ್ತಂಭಗಳು ಇದರಲ್ಲಿ ಸೇರಿವೆ.

ಅವು ಯಾವುವೆಂದರೆ: ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ನುಡಿಯುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಮತ್ತು ಸಾಧ್ಯವಾದರೆ ಅಲ್ಲಾಹನ ಪವಿತ್ರ ಭವನಕ್ಕೆ (ಕಅಬಾ) ಹಜ್ ಯಾತ್ರೆ ಮಾಡುವುದು, ಹಾಗೂ ಪರಿಶುದ್ಧ ಶರೀಅತ್ (ಇಸ್ಲಾಮೀ ಕಾನೂನು) ತಂದಿರುವ ಇತರ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುವುದು.

ಈ ಆಧಾರಸ್ತಂಭಗಳಲ್ಲಿ ಅತ್ಯಂತ ಪ್ರಮುಖವಾದುದು ಮತ್ತು ಮಹತ್ವಪೂರ್ಣವಾದುದು ಯಾವುದೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯವಚನ. ಅಲ್ಲಾಹನೊಬ್ಬನಿಗೇ ಆರಾಧನೆಯನ್ನು ನಿಷ್ಕಳಂಕವಾಗಿ ಅರ್ಪಿಸಬೇಕು ಮತ್ತು ಅವನಲ್ಲದ ಇತರರಿಗೆ ಅದನ್ನು ನಿಷೇಧಿಸಬೇಕು ಎಂಬುದು ಈ ಸಾಕ್ಷ್ಯವಚನದ ಬೇಡಿಕೆಯಾಗಿದೆ. ಇದೇ "ಲಾ ಇಲಾಹ ಇಲ್ಲಲ್ಲಾಹ್" ಎಂಬುದರ ಅರ್ಥ. ವಿದ್ವಾಂಸರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದಂತೆ, "ಸತ್ಯವಾಗಿ ಆರಾಧನೆಗೆ ಅರ್ಹನಾದವನು ಅಲ್ಲಾಹನ ಹೊರತು ಬೇರೆ ಯಾರೂ ಇಲ್ಲ" ಎಂಬುದು ಈ ವಚನದ ಅರ್ಥವಾಗಿದೆ. ಇದರ ಆಧಾರದಲ್ಲಿ ಮನುಷ್ಯರು, ದೇವದೂತರುಗಳು, ಜಿನ್ನ್‌ಗಳು ಅಥವಾ ಇನ್ನಾವುದೇ ಆಗಲಿ, ಅಲ್ಲಾಹನ ಹೊರತು ಆರಾಧಿಸಲ್ಪಡುವ ಎಲ್ಲವೂ ಸುಳ್ಳು ದೇವರುಗಳಾಗಿದ್ದಾರೆ. ಸತ್ಯವಾಗಿ ಆರಾಧನೆಗೆ ಅರ್ಹನಾದವನು ಅಲ್ಲಾಹು ಮಾತ್ರ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿ذَٰلِكَ بِأَنَّ ٱللَّهَ هُوَ ٱلۡحَقُّ وَأَنَّ مَا يَدۡعُونَ مِن دُونِهِۦ هُوَ ٱلۡبَٰطِلُ...﴾

“ಅದು ಏಕೆಂದರೆ ಅಲ್ಲಾಹು ಮಾತ್ರ ಸತ್ಯ, ಮತ್ತು ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುವುದೆಲ್ಲವೂ ಸುಳ್ಳು.” [ಅಲ್-ಹಜ್ಜ್: 62].

ಈಗಾಗಲೇ ವಿವರಿಸಿದಂತೆ, ಸರ್ವಶಕ್ತನಾದ ಅಲ್ಲಾಹು ಈ ಮೂಲಭೂತ ತತ್ವಕ್ಕಾಗಿ ಜಿನ್ನ್ ಮತ್ತು ಮಾನವರನ್ನು ಸೃಷ್ಟಿಸಿದನು, ಅದನ್ನೇ ಅವರಿಗೆ ಆಜ್ಞಾಪಿಸಿದನು, ಅದಕ್ಕಾಗಿಯೇ ತನ್ನ ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಅದಕ್ಕಾಗಿಯೇ ತನ್ನ ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಆದ್ದರಿಂದ, ದಾಸನು ಇದರ ಬಗ್ಗೆ ಚೆನ್ನಾಗಿ ಯೋಚಿಸಬೇಕು ಮತ್ತು ಆಳವಾಗಿ ಚಿಂತಿಸಬೇಕು; ಇದರಿಂದ ಹೆಚ್ಚಿನ ಮುಸಲ್ಮಾನರು ಈ ಮೂಲತತ್ವದ ಬಗ್ಗೆ ಹೊಂದಿರುವ ಅಗಾಧ ಅಜ್ಞಾನವು ಅವರಿಗೆ ಸ್ಪಷ್ಟವಾಗಬಹುದು; ಎಷ್ಟರಮಟ್ಟಿಗೆಂದರೆ ಅವರು (ಮುಸಲ್ಮಾನರಲ್ಲಿ ಕೆಲವರು) ಅಲ್ಲಾಹನೊಂದಿಗೆ ಇತರರನ್ನು ಆರಾಧಿಸಿದರು ಮತ್ತು ಅವನಿಗೆ ಸಲ್ಲಬೇಕಾದ ನಿಷ್ಕಳಂಕ ಹಕ್ಕನ್ನು ಇತರರಿಗೆ ಅರ್ಪಿಸಿದರು. ಅಲ್ಲಾಹನೇ ಸಹಾಯ ಮಾಡುವವನು.

ಸರ್ವಶಕ್ತನಾದ ಅಲ್ಲಾಹನಲ್ಲಿರುವ ವಿಶ್ವಾಸವು, ಅವನು ಜಗತ್ತಿನ ಸೃಷ್ಟಿಕರ್ತನು, ಅವರ ವ್ಯವಹಾರಗಳನ್ನು ನಿರ್ವಹಿಸುವವನು, ತನ್ನ ಜ್ಞಾನ ಮತ್ತು ಶಕ್ತಿಯಿಂದ ತಾನು ಬಯಸಿದಂತೆ ಅವರಲ್ಲಿ ಹಸ್ತಕ್ಷೇಪ ನಡೆಸುವವನು, ಮತ್ತು ಅವನು ಇಹಲೋಕ ಮತ್ತು ಪರಲೋಕದ ಮಾಲೀಕನು ಹಾಗೂ ಸರ್ವಲೋಕಗಳ ಪರಿಪಾಲಕನು, ಅವನ ಹೊರತು ಬೇರೆ ಸೃಷ್ಟಿಕರ್ತನಿಲ್ಲ, ಅವನ ಹೊರತು ಬೇರೆ ಪರಿಪಾಲಕನಿಲ್ಲ ಎಂದು ವಿಶ್ವಾಸವಿಡುವುದನ್ನೂ ಒಳಗೊಂಡಿದೆ. ಹಾಗೆಯೇ, ಅವನು ದಾಸರನ್ನು ಸುಧಾರಣೆಗೊಳಿಸಲು ಮತ್ತು ಇಹಲೋಕ ಹಾಗೂ ಪರಲೋಕದಲ್ಲಿ ಅವರಿಗೆ ಮೋಕ್ಷ ಮತ್ತು ಒಳಿತನ್ನು ತರುವ ವಿಷಯಗಳಿಗೆ ಅವರನ್ನು ಆಹ್ವಾನಿಸಲು ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಸರ್ವಶಕ್ತನಾದ ಅಲ್ಲಾಹನಿಗೆ ಈ ಮೇಲೆ ಹೇಳಿದ ಯಾವುದರಲ್ಲೂ ಯಾವುದೇ ಸಹಭಾಗಿಗಳಿಲ್ಲ. ಅಲ್ಲಾಹು ಹೇಳುತ್ತಾನೆ:

﴿ٱللَّهُ خَٰلِقُ كُلِّ شَيۡءٖۖ وَهُوَ عَلَىٰ كُلِّ شَيۡءٖ وَكِيلٞ 62﴾

“ಅಲ್ಲಾಹು ಪ್ರತಿಯೊಂದರ ಸೃಷ್ಟಿಕರ್ತನು; ಮತ್ತು ಅವನು ಪ್ರತಿಯೊಂದರ ಮೇಲ್ವಿಚಾರಕನು.” [ಅಝ್ಝುಮರ್: 62]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّ رَبَّكُمُ ٱللَّهُ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِۖ يُغۡشِي ٱلَّيۡلَ ٱلنَّهَارَ يَطۡلُبُهُۥ حَثِيثٗا وَٱلشَّمۡسَ وَٱلۡقَمَرَ وَٱلنُّجُومَ مُسَخَّرَٰتِۭ بِأَمۡرِهِۦٓۗ أَلَا لَهُ ٱلۡخَلۡقُ وَٱلۡأَمۡرُۗ تَبَارَكَ ٱللَّهُ رَبُّ ٱلۡعَٰلَمِينَ54﴾

“ನಿಶ್ಚಯವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ನಂತರ ಅವನು ಅರ್ಶಿನ ಮೇಲೆ ಆರೂಢನಾದನು. ಅವನು ರಾತ್ರಿಯಿಂದ ಹಗಲನ್ನು ಮುಚ್ಚುತ್ತಾನೆ, ಅದು ಅದನ್ನು ವೇಗವಾಗಿ ಹಿಂಬಾಲಿಸುತ್ತದೆ. ಮತ್ತು ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಅವನ ಆಜ್ಞೆಗೆ ಅಧೀನವಾಗಿವೆ. ತಿಳಿಯಿರಿ, ಸೃಷ್ಟಿ ಮತ್ತು ಆಜ್ಞೆ ಅವನಿಗೇ ಸೇರಿದೆ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಅತ್ಯಂತ ಅನುಗ್ರಹಪೂರ್ಣನಾಗಿದ್ದಾನೆ.” [ಅಲ್-ಅಅ್‌ರಾಫ್: 54].

ಸರ್ವಶಕ್ತನಾದ ಅಲ್ಲಾಹನಲ್ಲಿರುವ ವಿಶ್ವಾಸವು, ಅವನ ಪವಿತ್ರ ಗ್ರಂಥದಲ್ಲಿ (ಕುರ್‌ಆನ್) ಉಲ್ಲೇಖಿಸಲಾದ ಮತ್ತು ಅವನ ವಿಶ್ವಾಸಾರ್ಹ ಸಂದೇಶವಾಹಕರಿಂದ (ಪ್ರವಾದಿ ಮುಹಮ್ಮದ್(ಸ) ದೃಢೀಕರಿಸಲ್ಪಟ್ಟ ಅವನ ಸುಂದರವಾದ ನಾಮಗಳು ಮತ್ತು ಉನ್ನತ ಗುಣಲಕ್ಷಣಗಳನ್ನು ಯಾವುದೇ ರೀತಿಯ ತಿರುಚುವಿಕೆ, ನಿಷ್ಕ್ರಿಯತೆ, ವಿಧಾನ ಕೊಡದೇ ಅಥವಾ ಹೋಲಿಕೆ ಮಾಡದೆ ವಿಶ್ವಾಸವಿಡುವುದನ್ನೂ ಒಳಗೊಂಡಿದೆ.

﴿...لَيۡسَ كَمِثۡلِهِۦ شَيۡءٞۖ وَهُوَ ٱلسَّمِيعُ ٱلۡبَصِيرُ﴾

“ಅವನಂತೆ ಯಾವುದೂ ಇಲ್ಲ; ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ.” [ಅಶ್ಶೂರಾ:11].

ಆದ್ದರಿಂದ, ಅವು ಸರ್ವಶಕ್ತನಾದ ಅಲ್ಲಾಹನನ್ನು ವರ್ಣಿಸುವ ಮಹಾನ್ ಅರ್ಥಗಳನ್ನು ಒಳಗೊಂಡಿವೆ ಎಂಬ ವಿಶ್ವಾಸದೊಂದಿಗೆ, ಅವು (ಕುರ್‌ಆನ್ ಮತ್ತು ಸುನ್ನತ್‌ನಲ್ಲಿ) ಬಂದಿರುವಂತೆಯೇ, ‘ಹೇಗೆ’ ಎಂದು ಪ್ರಶ್ನಿಸದೆ ಅಂಗೀಕರಿಸುವುದು, ಮತ್ತು ಅವನ ಗುಣಲಕ್ಷಣಗಳಲ್ಲಿ ಯಾವುದನ್ನೂ ಅವನ ಸೃಷ್ಟಿಗಳಿಗೆ ಹೋಲಿಸದೆ, ಅವನಿಗೆ ಯೋಗ್ಯವಾದ ರೀತಿಯಲ್ಲಿಯೇ ಅವನನ್ನು ವರ್ಣಿಸುವುದು ಕಡ್ಡಾಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿فَلَا تَضۡرِبُواْ لِلَّهِ ٱلۡأَمۡثَالَۚ إِنَّ ٱللَّهَ يَعۡلَمُ وَأَنتُمۡ لَا تَعۡلَمُونَ74﴾

“ಆದ್ದರಿಂದ ನೀವು ಅಲ್ಲಾಹನಿಗೆ ಉದಾಹರಣೆಗಳನ್ನು ನೀಡಬೇಡಿ. ನಿಶ್ಚಯವಾಗಿಯೂ ಅಲ್ಲಾಹು ತಿಳಿದಿದ್ದಾನೆ ಮತ್ತು ನೀವು ತಿಳಿದಿಲ್ಲ.” [ಅನ್ನಹ್ಲ್: 74].

ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಲ್ಲಾಹನ ಸಂದೇಶವಾಹಕರ (ಸ) ಸಹಚರರು (ಸಹಾಬಿಗಳು) ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸಿದವರಾದ 'ಅಹ್ಲು ಸ್ಸುನ್ನ ವಲ್-ಜಮಾಅ'ದವರ ವಿಶ್ವಾಸವು (ಅಕೀದ) ಇದೇ ಆಗಿದೆ. ಇದನ್ನು ಇಮಾಮ್ ಅಬುಲ್-ಹಸನ್ ಅಶ್ಅರಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಯವರು "ಅಲ್-ಮಕಾಲಾತ್" ಎಂಬ ಗ್ರಂಥದಲ್ಲಿ ಹದೀಸ್ ವಿದ್ವಾಂಸರು ಮತ್ತು ಅಹ್ಲುಸ್ಸುನ್ನದವರಿಂದ ಉಲ್ಲೇಖಿಸಿದ್ದಾರೆ. ಇತರ ವಿದ್ವಾಂಸರು ಮತ್ತು ಸತ್ಯವಿಶ್ವಾಸಿಗಳು ಸಹ ಇದನ್ನು ಉಲ್ಲೇಖಿಸಿದ್ದಾರೆ.

ಅಲ್-ಔಝಾಈ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ಝುಹ್ರಿ ಮತ್ತು ಮಕ್ಹೂಲ್ ರಲ್ಲಿ ಅಲ್ಲಾಹನ ಗುಣಲಕ್ಷಣಗಳನ್ನು ಹೊಂದಿರುವ ವಚನಗಳ ಬಗ್ಗೆ ಕೇಳಲಾಯಿತು. ಆಗ ಅವರಿಬ್ಬರೂ ಹೇಳಿದರು: 'ಅವುಗಳು ಬಂದಂತೆಯೇ ಅವುಗಳನ್ನು ಹೋಗಲು ಬಿಡಿ'."3

ಅಲ್-ಔಝಾಈ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ನಾವು ಮತ್ತು ತಾಬಈನ್‌ಗಳು ಹೇರಳ ಸಂಖ್ಯೆಯಲ್ಲಿದ್ದಾಗ, ಸರ್ವಶಕ್ತನಾದ ಅಲ್ಲಾಹು ತನ್ನ ಅರ್ಶಿನ ಮೇಲಿದ್ದಾನೆ ಎಂದು ನಾವು ಹೇಳುತ್ತಿದ್ದೆವು ಮತ್ತು ಸುನ್ನತ್‌ನಲ್ಲಿ ಬಂದಿರುವ ಗುಣಲಕ್ಷಣಗಳಲ್ಲಿ ವಿಶ್ವಾಸವಿಡುತ್ತಿದ್ದೆವು."4

ವಲೀದ್ ಬಿನ್ ಮುಸ್ಲಿಮ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ಇಮಾಮ್ ಮಾಲಿಕ್, ಔಝಾಈ, ಲೈಸ್ ಬಿನ್ ಸಅದ್, ಮತ್ತು ಸುಫ್ಯಾನ್ ಸೌರಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಯವರಲ್ಲಿ ಅಲ್ಲಾಹನ ಗುಣಲಕ್ಷಣಗಳ ಬಗ್ಗೆ ಬಂದಿರುವ ವರದಿಗಳ ಕುರಿತು ಕೇಳಲಾಯಿತು. ಆಗ ಅವರೆಲ್ಲರೂ ಹೇಳಿದರು: 'ಅವುಗಳು ಬಂದಂತೆಯೇ, ಹೇಗೆ ಎಂದು ಕೇಳದೆ ಅವುಗಳನ್ನು ಹೋಗಲು ಬಿಡಿ'."5

ರಬೀಅ ಬಿನ್ ಅಬೂ ಅಬ್ದುರ್‍ರಹ್ಮಾನ್ - ಇಮಾಂ ಮಾಲಿಕರ ಗುರುವರ್ಯ (ಅಲ್ಲಾಹು ಅವರಿಬ್ಬರ ಮೇಲೂ ಕರುಣೆ ತೋರಲಿ) - ರಲ್ಲಿ 'ಇಸ್ತಿವಾ' (ಅಲ್ಲಾಹು ಅರ್ಶಿನ ಮೇಲೆ ಆರೂಢನಾಗುವುದು) ಬಗ್ಗೆ ಕೇಳಿದಾಗ, ಅವರು ಹೇಳಿದರು: "ಇಸ್ತಿವಾ ಎಂಬುದು ತಿಳಿದಿರುವ ವಿಷಯವಾಗಿದೆ. ಅದು 'ಹೇಗೆ' ಎಂಬುದು ಗ್ರಹಿಕೆಗೆ ಮೀರಿದ್ದಾಗಿದೆ. ಸಂದೇಶವು ಅಲ್ಲಾಹನ ಕಡೆಯಿಂದ ಬರುತ್ತದೆ. ಅದನ್ನು ಸ್ಪಷ್ಟವಾಗಿ ತಲುಪಿಸುವ ಜವಾಬ್ದಾರಿ ಸಂದೇಶವಾಹಕರದ್ದು, ಮತ್ತು ಅದನ್ನು ದೃಢೀಕರಿಸುವ ಜವಾಬ್ದಾರಿ ನಮ್ಮದು."6 ಇಮಾಮ್ ಮಾಲಿಕ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರಲ್ಲಿ ಇದರ ಬಗ್ಗೆ ಪ್ರಶ್ನಿಸಲಾದಾಗ, ಅವರು ಹೇಳಿದರು: "ಇಸ್ತಿವಾ ಎಂಬುದು ತಿಳಿದಿರುವ ವಿಷಯವಾಗಿದೆ. ಅದು 'ಹೇಗೆ' ಎಂಬುದು ಅಜ್ಞಾತವಾಗಿದೆ. ಅದರ ಮೇಲೆ ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಅದರ ಬಗ್ಗೆ ಪ್ರಶ್ನಿಸುವುದು ಬಿದ್ಅತ್ (ಧರ್ಮದಲ್ಲಿ ಹೊಸ ಆವಿಷ್ಕಾರ) ಆಗಿದೆ." ನಂತರ ಅವರು ಪ್ರಶ್ನಿಸಿದವನಿಗೆ ಹೇಳಿದರು: "ನನಗೆ ನೀನು ಕೆಟ್ಟ ಮನುಷ್ಯನಂತೆ ಕಾಣುತ್ತಿರುವೆ!" ನಂತರ ಅವನನ್ನು ಹೊರಗೆ ಕಳುಹಿಸಲು ಆದೇಶಿಸಿದರು.7 ಈ ಅರ್ಥವು ಉಮ್ಮುಲ್ ಮುಅ್‌ಮಿನೀನ್ ಉಮ್ಮು ಸಲಮಾ (ರ) ರಿಂದಲೂ ವರದಿಯಾಗಿದೆ.8

ಇಮಾಮ್ ಅಬೂ ಅಬ್ದುರ್‍ರಹ್ಮಾನ್ ಇಬ್ನುಲ್-ಮುಬಾರಕ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ನಮ್ಮ ರಬ್ಬ್ ತನ್ನ ಸೃಷ್ಟಿಗಳಿಂದ ಬೇರ್ಪಟ್ಟು ಆಕಾಶಗಳ ಮೇಲೆ, ತನ್ನ ಅರ್ಶಿನ ಮೇಲಿದ್ದಾನೆ ಎಂದು ನಾವು ಅರಿಯುತ್ತೇವೆ."9

ಈ ವಿಷಯದಲ್ಲಿ ಇಮಾಮ್‌ಗಳ ಹೇಳಿಕೆಗಳು ಬಹಳಷ್ಟಿದ್ದು, ಅವೆಲ್ಲವನ್ನೂ ಈ ಉಪನ್ಯಾಸದಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುವವರು ಈ ವಿಷಯದಲ್ಲಿ ಅಹ್ಲುಸುನ್ನತ್‌ನ ವಿದ್ವಾಂಸರು ಬರೆದ ಕೃತಿಗಳನ್ನು ಪರಿಶೀಲಿಸಲಿ. ಉದಾಹರಣೆಗೆ ಇಮಾಮ್ ಅಹ್ಮದ್ ರವರ ಪುತ್ರ ಅಬ್ದುಲ್ಲಾ ರವರ "ಅಸ್ಸುನ್ನ", ಮಹಾನ್ ಇಮಾಮ್ ಮುಹಮ್ಮದ್ ಬಿನ್ ಖುಝೈಮಾ ರವರ "ಅತ್ತೌಹೀದ್", ಅಬುಲ್-ಕಾಸಿಮ್ ಅಲ್ಲಾಲಕಾಈ ಅತ್ತಬರಿ ರವರ "ಅಸ್ಸುನ್ನ", ಅಬೂ ಬಕರ್ ಬಿನ್ ಅಬೂ ಆಸಿಮ್ ರವರ "ಅಸ್ಸುನ್ನ", ಮತ್ತು ಶೈಖುಲ್-ಇಸ್ಲಾಂ ಇಬ್ನ್ ತೈಮಿಯ್ಯ ರವರು ಹಮಾ ನಿವಾಸಿಗಳಿಗೆ ನೀಡಿದ ಉತ್ತರ — ಇದು ಒಂದು ಮಹಾನ್ ಮತ್ತು ಅತ್ಯಂತ ಪ್ರಯೋಜನಕಾರಿ ಉತ್ತರವಾಗಿದ್ದು, ಇದರಲ್ಲಿ ಅವರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಅಹ್ಲುಸ್ಸುನ್ನದವರ ವಿಶ್ವಾಸವನ್ನು ಸ್ಪಷ್ಟಪಡಿಸಿದ್ದಾರೆ, ಮತ್ತು ಅವರ ಅನೇಕ ಮಾತುಗಳನ್ನು, ಹಾಗೂ ಅಹ್ಲುಸ್ಸುನ್ನದವರು ಹೇಳಿದ್ದು ಸತ್ಯವೆಂಬುದಕ್ಕೆ ಧಾರ್ಮಿಕ ಮತ್ತು ಬೌದ್ಧಿಕ ಪುರಾವೆಗಳನ್ನು ಉಲ್ಲೇಖಿಸಿದ್ದಾರೆ ಹಾಗೂ ಅವರ ವಿರೋಧಿಗಳು ಹೇಳಿದ್ದು ಸುಳ್ಳೆಂಬುದನ್ನು ಬಿಡಿಸಿ ತೋರಿಸಿದ್ದಾರೆ.

ಅದೇ ರೀತಿ, "ಅತ್ತದ್ಮುರಿಯ್ಯ" ಎಂದು ಹೆಸರಿಸಲಾದ ಅವರ ಕಿರುಕೃತಿ. ಅದರಲ್ಲಿ ಅವರು ಸದುದ್ದೇಶದಿಂದ ಮತ್ತು ಸತ್ಯವನ್ನು ತಿಳಿದುಕೊಳ್ಳುವ ಬಯಕೆಯಿಂದ ಈ ವಿಷಯವನ್ನು ನೋಡುವ ಪ್ರತಿಯೊಬ್ಬ ಜ್ಞಾನಿಗೂ ಈ ವಿಷಯವನ್ನು ವಿಸ್ತಾರವಾಗಿ ವಿವರಿಸಿದ್ದಾರೆ, ಅಹ್ಲುಸ್ಸುನ್ನದವರ ವಿಶ್ವಾಸವನ್ನು ಅದರ ಪಾರಂಪರಿಕ ಮತ್ತು ಬೌದ್ಧಿಕ ಪುರಾವೆಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ, ಮತ್ತು ವಿರೋಧಿಗಳಿಗೆ ಸತ್ಯವನ್ನು ಪ್ರಕಟಗೊಳಿಸುವ ಮತ್ತು ಸುಳ್ಳನ್ನು ಚಚ್ಚಿ ಹಾಕುವ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ, ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಹ್ಲುಸ್ಸುನ್ನ ವಲ್-ಜಮಾಅ ದವರ ವಿಶ್ವಾಸವೇನೆಂದರೆ; ಅವರು ಸರ್ವಶಕ್ತನಾದ ಅಲ್ಲಾಹನಿಗೆ, ಅವನು ತನ್ನ ಗ್ರಂಥದಲ್ಲಿ ತನಗಾಗಿ ದೃಢೀಕರಿಸಿದ್ದನ್ನು, ಅಥವಾ ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರು ತಮ್ಮ ಸುನ್ನತ್‌ನಲ್ಲಿ ಅವನಿಗಾಗಿ ದೃಢೀಕರಿಸಿದ್ದನ್ನು, ಯಾವುದೇ ಹೋಲಿಕೆಯಿಲ್ಲದೆ ದೃಢೀಕರಿಸುತ್ತಾರೆ, ಮತ್ತು ಸರ್ವಶಕ್ತನಾದ ಅವನನ್ನು, ಅವನ ಸೃಷ್ಟಿಗಳಿಗೆ ಹೋಲಿಕೆಯಾಗದಂತೆ, ನಿಷೇಧದಿಂದ ಮುಕ್ತಗೊಳಿಸುವ ರೀತಿಯಲ್ಲಿ ಪರಿಶುದ್ಧಗೊಳಿಸುತ್ತಾರೆ. ಆದ್ದರಿಂದ, ಅವರು ವಿರೋಧಾಭಾಸಕ್ಕೆ ಒಳಗಾಗದೆ ಸುರಕ್ಷಿತರಾಗಿದ್ದಾರೆ. ಮತ್ತು ಅವರು—ಅಲ್ಲಾಹನ ಸಹಾಯದಿಂದ—ಎಲ್ಲಾ ಪುರಾವೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹನ ನಡವಳಿಕೆಯೇನೆಂದರೆ, ಯಾರು ಅವನು ತನ್ನ ಸಂದೇಶವಾಹಕರ ಮೂಲಕ ಕಳುಹಿಸಿದ ಸತ್ಯವನ್ನು ದೃಢವಾಗಿ ಹಿಡಿದುಕೊಳ್ಳುತ್ತಾರೋ, ಅದಕ್ಕಾಗಿ ತಮ್ಮ ಸಾಮರ್ಥ್ಯವನ್ನು ವ್ಯಯಿಸುತ್ತಾರೋ, ಮತ್ತು ಅದನ್ನು ಹುಡುಕುವಲ್ಲಿ ಅಲ್ಲಾಹನಿಗಾಗಿ ನಿಷ್ಕಳಂಕರಾಗಿರುತ್ತಾರೋ, ಅವರಿಗೆ ಅವನು ಸತ್ಯದ ಕಡೆಗೆ ಮಾರ್ಗದರ್ಶನ ನೀಡುತ್ತಾನೆ ಮತ್ತು ಅವರ ಪುರಾವೆಯನ್ನು ಪ್ರಕಟಗೊಳಿಸುತ್ತಾನೆ. ಸರ್ವಶಕ್ತನಾದ ಅಲ್ಲಾಹು ಹೇಳಿದಂತೆ:

﴿بَلۡ نَقۡذِفُ بِٱلۡحَقِّ عَلَى ٱلۡبَٰطِلِ فَيَدۡمَغُهُۥ فَإِذَا هُوَ زَاهِقٞ...﴾

“ಬದಲಿಗೆ, ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುತ್ತೇವೆ. ಆಗ ಅದು ಅದನ್ನು ನಾಶಪಡಿಸುತ್ತದೆ, ಮತ್ತು ಆಗೋ ಅದು ಕಣ್ಮರೆಯಾಗಿ ಬಿಡುತ್ತದೆ.” [ಅಲ್-ಅಂಬಿಯಾ: 18].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَلَا يَأۡتُونَكَ بِمَثَلٍ إِلَّا جِئۡنَٰكَ بِٱلۡحَقِّ وَأَحۡسَنَ تَفۡسِيرًا33﴾

“ಮತ್ತು ಅವರು ನಿಮ್ಮ ಬಳಿಗೆ ಯಾವುದೇ ಉದಾಹರಣೆಯನ್ನು ತಂದರೂ, ನಾವು ನಿಮಗೆ ಸತ್ಯವನ್ನು ಮತ್ತು ಉತ್ತಮವಾದ ವಿವರಣೆಯನ್ನು ತರದೆ ಇರಲಾರೆವು.” [ಅಲ್-ಫುರ್ಕಾನ್: 33].

ಇನ್ನು ಯಾರು ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಹ್ಲುಸ್ಸುನ್ನದವರ ವಿಶ್ವಾಸಕ್ಕೆ ವಿರುದ್ಧವಾಗಿರುತ್ತಾರೋ, ಅವರು ಖಂಡಿತವಾಗಿಯೂ ಪಾರಂಪರಿಕ ಮತ್ತು ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾಗಿ ಸಾಗುತ್ತಾರೆ; ಜೊತೆಗೆ ಅವರು ದೃಢೀಕರಿಸುವ ಮತ್ತು ನಿರಾಕರಿಸುವ ಪ್ರತಿಯೊಂದು ವಿಷಯದಲ್ಲೂ ಸ್ಪಷ್ಟವಾದ ವಿರೋಧಾಭಾಸವಿರುತ್ತದೆ. ಪ್ರಸಿದ್ಧ ಕುರ್‌ಆನ್ ವ್ಯಾಖ್ಯಾನಕಾರರಾದ ಹಾಫಿಝ್ ಇಬ್ನ್ ಕಸೀರ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ತಮ್ಮ ಪ್ರಸಿದ್ಧ ತಫ್ಸೀರ್‌ನಲ್ಲಿ ಈ ವಿಷಯದ ಬಗ್ಗೆ ಉತ್ತಮವಾದ ಮಾತುಗಳನ್ನು ಹೇಳಿದ್ದಾರೆ. ಅದು ಅವರು ಸರ್ವಶಕ್ತನಾದ ಅಲ್ಲಾಹನ ಈ ಕೆಳಗಿನ ವಚನದ ಬಗ್ಗೆ ಮಾತನಾಡುವಾಗ:

﴿إِنَّ رَبَّكُمُ ٱللَّهُ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِ...﴾

“ನಿಶ್ಚಯವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ನಂತರ ಅವನು ಅರ್ಶಿನ ಮೇಲೆ ಆರೂಢನಾದನು.”

[ಅಲ್-ಅಅ್‌ರಾಫ್: 54].

ಅವರ ಮಾತಿನಲ್ಲಿರುವ ಮಹಾನ್ ಪ್ರಯೋಜನದಿಂದಾಗಿ ಅದನ್ನು ಇಲ್ಲಿ ಉಲ್ಲೇಖಿಸುವುದು ಉತ್ತಮವೆಂದು ತೋರುತ್ತದೆ. ಅವರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದ ಮಾತುಗಳು ಹೀಗಿವೆ:

"ಈ ವಿಷಯದಲ್ಲಿ ಜನರಿಗೆ ಬಹಳಷ್ಟು ಅಭಿಪ್ರಾಯಗಳಿವೆ. ಇದು ಅವುಗಳನ್ನು ವಿವರಿಸುವ ಸ್ಥಳವಲ್ಲ. ನಾವು ಈ ವಿಷಯದಲ್ಲಿ ಸಜ್ಜನರಾದ ಪೂರ್ವಜರ ಮಾರ್ಗವನ್ನು, ಅಂದರೆ ಇಮಾಮ್ ಮಾಲಿಕ್, ಅಲ್-ಔಝಾಈ, ಅಸ್ಸೌರಿ, ಲೈಸ್ ಬಿನ್ ಸಅದ್, ಶಾಫಿಈ, ಅಹ್ಮದ್ ಬಿನ್ ಹಂಬಲ್, ಇಸ್ಹಾಕ್ ಬಿನ್ ರಾಹವೈಹ್, ಮತ್ತು ಮುಸ್ಲಿಂ ಇಮಾಮ್‌ಗಳಲ್ಲಿ ಹಿಂದಿನ ಮತ್ತು ಇಂದಿನವರ ಮಾರ್ಗವನ್ನು ಅನುಸರಿಸುತ್ತೇವೆ. ಅದು ಯಾವುದೆಂದರೆ, ಅವುಗಳನ್ನು (ಅಲ್ಲಾಹನ ಗುಣಲಕ್ಷಣಗಳನ್ನು) 'ಹೇಗೆ' ಎಂದು ಕೇಳದೆ, ಹೋಲಿಕೆ ಮಾಡದೆ, ಮತ್ತು ನಿರಾಕರಿಸದೆ ಅವು ಬಂದಂತೆಯೇ ಹೋಗಲು ಬಿಡುವುದು. ಹೋಲಿಕೆ ಮಾಡುವವರ ಮನಸ್ಸಿನಲ್ಲಿ ಮೂಡುವ ಬಾಹ್ಯಾರ್ಥವು ಅಲ್ಲಾಹನಿಗೆ ಸಂಬಂಧಿಸಿದಂತೆ ನಿಷೇಧಿಸಲಾದ ವಿಷಯವಾಗಿದೆ. ಏಕೆಂದರೆ ಅಲ್ಲಾಹು ತನ್ನ ಸೃಷ್ಟಿಗಳಲ್ಲಿ ಯಾವುದನ್ನೂ ಹೋಲುವುದಿಲ್ಲ ಮತ್ತು

﴿...لَيۡسَ كَمِثۡلِهِۦ شَيۡءٞۖ وَهُوَ ٱلسَّمِيعُ ٱلۡبَصِيرُ﴾

“ಅವನಂತೆ ಯಾವುದೂ ಇಲ್ಲ; ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ.” [ಅಶ್ಶೂರಾ:11]. ಬದಲಿಗೆ, ವಿಷಯವು ಇಮಾಮ್‌ಗಳು ಹೇಳಿದಂತೆ ಆಗಿರುತ್ತದೆ - ಅವರಲ್ಲಿ ಬುಖಾರಿಯ ಗುರುಗಳಾದ ನುಐಮ್ ಬಿನ್ ಹಮ್ಮಾದ್ ಅಲ್-ಖುಝಾಈ ಕೂಡ ಸೇರುತ್ತಾರೆ. ಅವರೆಲ್ಲರೂ ಹೇಳಿದ್ದೇನೆಂದರೆ: ಯಾರು ಅಲ್ಲಾಹನನ್ನು ಅವನ ಸೃಷ್ಟಿಗಳಿಗೆ ಹೋಲಿಸುತ್ತಾರೋ ಅವರು ಕುಫ್ರ್ (ಸತ್ಯನಿಷೇಧ) ಮಾಡಿದರು, ಮತ್ತು ಯಾರು ಅಲ್ಲಾಹು ತನ್ನನ್ನು ತಾನು ವರ್ಣಿಸಿಕೊಂಡಿರುವುದನ್ನು ನಿಷೇಧಿಸುತ್ತಾರೋ ಅವರು ಕೂಡ ಕುಫ್ರ್ ಮಾಡಿದರು.10 ಅಲ್ಲಾಹು ತನ್ನನ್ನು ತಾನು ವರ್ಣಿಸಿಕೊಂಡಿರುವುದರಲ್ಲಾಗಲೀ ಅಥವಾ ಅವನ ಸಂದೇಶವಾಹಕರು ಅವನನ್ನು ವರ್ಣಿಸಿರುವುದರಲ್ಲಾಗಲೀ ಯಾವುದೇ ಹೋಲಿಕೆಯಿಲ್ಲ. ಆದ್ದರಿಂದ, ಯಾರು ಸ್ಪಷ್ಟವಾದ ಕುರ್‌ಆನ್ ವಚನಗಳು ಮತ್ತು ದೃಢವಾದ ಹದೀಸ್ ವರದಿಗಳಲ್ಲಿ ಬಂದಿರುವುದನ್ನು, ಅಲ್ಲಾಹನ ಮಹಿಮೆಗೆ ಹೊಂದಿಕೆಯಾಗುವ ರೀತಿಯಲ್ಲಿ ಅಲ್ಲಾಹನಿಗೆ ದೃಢಪಡಿಸುತ್ತಾರೋ ಮತ್ತು ಸರ್ವಶಕ್ತನಾದ ಅಲ್ಲಾಹನಿಗೆ ನ್ಯೂನತೆಗಳನ್ನು ನಿರಾಕರಿಸುತ್ತಾರೋ, ಅವರು ಸನ್ಮಾರ್ಗವನ್ನು ಅನುಸರಿಸಿದರು."11 ಇಬ್ನ್ ಕಸೀರ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರ ಮಾತುಗಳು ಇಲ್ಲಿಗೆ ಮುಕ್ತಾಯವಾಗುತ್ತವೆ.

ಅಲ್ಲಾಹನಲ್ಲಿರುವ ವಿಶ್ವಾಸವು ಈ ಕೆಳಗಿನವುಗಳನ್ನು ಸಹ ಒಳಗೊಂಡಿದೆ: ಈಮಾನ್ (ವಿಶ್ವಾಸ) ಎಂದರೆ ಮಾತು ಮತ್ತು ಕ್ರಿಯೆಯಾಗಿದೆ, ಅದು ವಿಧೇಯತೆಯಿಂದ ಹೆಚ್ಚಾಗುತ್ತದೆ ಮತ್ತು ಅವಿಧೇಯತೆಯಿಂದ ಕಡಿಮೆಯಾಗುತ್ತದೆ ಎಂದು ವಿಶ್ವಾಸವಿಡುವುದು. ಹಾಗೆಯೇ, ಶಿರ್ಕ್ ಮತ್ತು ಕುಫ್ರ್ ಗಿಂತ ಕೆಳಗಿನ ದರ್ಜೆಯ ಪಾಪಗಳಾದ ವ್ಯಭಿಚಾರ, ಕಳ್ಳತನ, ಬಡ್ಡಿ ತಿನ್ನುವುದು, ಮಾದಕ ದ್ರವ್ಯ ಸೇವನೆ, ಹೆತ್ತವರಿಗೆ ಅವಿಧೇಯತೆ ತೋರುವುದು, ಮತ್ತು ಇತರ ಮಹಾಪಾಪಗಳನ್ನು ಮುಸಲ್ಮಾನರಲ್ಲಿ ಯಾರಾದರೂ ಮಾಡಿದರೆ, ಅವರು ಅದನ್ನು ಧರ್ಮಸಮ್ಮತವೆಂದು ಪರಿಗಣಿಸುವ ತನಕ, ಅವರನ್ನು ಕಾಫಿರ್ (ಸತ್ಯನಿಷೇಧಿ) ಎಂದು ಘೋಷಿಸಲು ಅನುಮತಿಯಿಲ್ಲ ಎಂದು ವಿಶ್ವಾಸವಿಡುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّ ٱللَّهَ لَا يَغۡفِرُ أَن يُشۡرَكَ بِهِۦ وَيَغۡفِرُ مَا دُونَ ذَٰلِكَ لِمَن يَشَآءُ...﴾

“ನಿಶ್ಚಯವಾಗಿಯೂ ಅಲ್ಲಾಹು ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಕ್ಷಮಿಸುವುದಿಲ್ಲ, ಆದರೆ ಅದಕ್ಕಿಂತ ಕೆಳಗಿನ (ಪಾಪಗಳನ್ನು) ತಾನು ಇಚ್ಛಿಸಿದವರಿಗೆ ಕ್ಷಮಿಸುತ್ತಾನೆ.” [ಅನ್ನಿಸಾ: 48]. ಇದು ಅಲ್ಲಾಹನ ಸಂದೇಶವಾಹಕರಿಂದ (ಸ) ಮುತವಾತಿರ್ (ಅಸಂಖ್ಯಾತ ಮಾರ್ಗಗಳಿಂದ ವರದಿಯಾದ) ಹದೀಸ್‌ಗಳಲ್ಲೂ ದೃಢಪಟ್ಟಿದೆ. ಅವುಗಳಲ್ಲಿ ಒಂದು ಹೀಗಿದೆ:

«إِنَّ اللهَ يُخْرِجُ مِنَ النَّارِ مَنْ كَانَ فِي قَلْبِهِ مِثْقَالُ حَبَّةٍ مِنْ خَرْدَلٍ مِنْ إِيْمَانٍ».

ನಿಶ್ಚಯವಾಗಿಯೂ ಯಾರ ಹೃದಯದಲ್ಲಿ ಸಾಸಿವೆ ಕಾಳಿನಷ್ಟು ಈಮಾನ್ ಇದೆಯೋ ಅವರನ್ನು ಅಲ್ಲಾಹು ನರಕದಿಂದ ಹೊರತೆಗೆಯುತ್ತಾನೆ."12

ಎರಡನೆಯ ಮೂಲತತ್ವ: ದೇವದೂತರುಗಳಲ್ಲಿ ವಿಶ್ವಾಸವಿಡುವುದು,

ಇದು ಎರಡು ವಿಷಯಗಳನ್ನು ಒಳಗೊಂಡಿದೆ: ಮೊದಲನೆಯ ವಿಷಯ: ದೇವದೂತರುಗಳಲ್ಲಿ ಒಟ್ಟಾರೆಯಾಗಿ ವಿಶ್ವಾಸವಿಡುವುದು; ಅಂದರೆ, ಅಲ್ಲಾಹು ತನ್ನ ಆಜ್ಞಾಪಾಲನೆಗಾಗಿ ದೇವದೂತರುಗಳನ್ನು ಸೃಷ್ಟಿಸಿದ್ದಾನೆ ಮತ್ತು ಅವರನ್ನು ಈ ಕೆಳಗಿನಂತೆ ವರ್ಣಿಸಿದ್ದಾನೆ ಎಂದು ವಿಶ್ವಾಸವಿಡುವುದು:

﴿وَقَالُواْ ٱتَّخَذَ ٱلرَّحۡمَٰنُ وَلَدٗاۗ سُبۡحَٰنَهُۥۚ بَلۡ عِبَادٞ مُّكۡرَمُونَ 26 لَا يَسۡبِقُونَهُۥ بِٱلۡقَوۡلِ وَهُم بِأَمۡرِهِۦ يَعۡمَلُونَ27 يَعۡلَمُ مَا بَيۡنَ أَيۡدِيهِمۡ وَمَا خَلۡفَهُمۡ وَلَا يَشۡفَعُونَ إِلَّا لِمَنِ ٱرۡتَضَىٰ وَهُم مِّنۡ خَشۡيَتِهِۦ مُشۡفِقُونَ28﴾

“ಮತ್ತು ಅವರು ಹೇಳಿದರು: ‘ಪರಮ ದಯಾಮಯನು (ಅಲ್ಲಾಹು) ಪುತ್ರನನ್ನು ಸ್ವೀಕರಿಸಿದ್ದಾನೆ.’ ಅವನು ಪರಿಶುದ್ಧನು! ಬದಲಿಗೆ, ಅವರು (ದೇವದೂತರುಗಳು) ಗೌರವಾನ್ವಿತ ದಾಸರಾಗಿದ್ದಾರೆ.

ಅವರು ಅವನ ಮಾತನ್ನು ಮೀರಿ ಮಾತನಾಡುವುದಿಲ್ಲ, ಮತ್ತು ಅವರು ಅವನ ಆಜ್ಞೆಯಂತೆಯೇ ಕಾರ್ಯನಿರ್ವಹಿಸುತ್ತಾರೆ.

ಅವರ ಮುಂದಿರುವುದನ್ನೂ ಮತ್ತು ಅವರ ಹಿಂದಿರುವುದನ್ನೂ ಅವನು ತಿಳಿದಿದ್ದಾನೆ. ಮತ್ತು ಅವನು ಯಾರ ಬಗ್ಗೆ ಸಂಪ್ರೀತನಾಗಿದ್ದಾನೋ ಅವರ ಹೊರತು ಬೇರೆ ಯಾರಿಗೂ ಅವರು ಶಿಫಾರಸ್ಸು ಮಾಡುವುದಿಲ್ಲ. ಮತ್ತು ಅವರು ಅವನ ಭಯದಿಂದ ನಡುಗುತ್ತಾರೆ.” [ಅಲ್-ಅಂಬಿಯಾ: 26-28].

ಅವರು ಅನೇಕ ವರ್ಗಗಳನ್ನು ಹೊಂದಿದ್ದಾರೆ. ಅವರಲ್ಲಿ ಅರ್ಶನ್ನು ಹೊರುವವರು, ಸ್ವರ್ಗ ಮತ್ತು ನರಕದ ಕಾವಲುಗಾರರು, ಮತ್ತು ದಾಸರ ಕೆಲಸ-ಕಾರ್ಯಗಳನ್ನು ದಾಖಲಿಸುವವರು ಸೇರಿದ್ದಾರೆ. ಎರಡನೆಯ ವಿಷಯ: ದೇವದೂತರಲ್ಲಿ ವಿವರಣಾತ್ಮಕವಾಗಿ ವಿಶ್ವಾಸವಿಡುವುದು. ಅಂದರೆ, ಅವರ ಪೈಕಿ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಹೆಸರು ಹೇಳಿದವರಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ ವಹೀ (ದೇವವಾಣಿ) ಯನ್ನು ತರುವ ಜಿಬ್ರೀಲ್, ಮಳೆಯ ಜವಾಬ್ದಾರಿ ಹೊತ್ತ ಮಿಕಾಈಲ್, ನರಕದ ಕಾವಲುಗಾರರಾದ ಮಾಲಿಕ್, ಮತ್ತು ಸೂರ್ (ಕಹಳೆ) ಊದುವ ಜವಾಬ್ದಾರಿ ಹೊತ್ತ ಇಸ್ರಾಫೀಲ್. ಸಹೀಹ್ ಹದೀಸ್‌ಗಳಲ್ಲಿ ಅವರ ಪ್ರಸ್ತಾಪ ಬಂದಿದೆ. ಅವುಗಳಲ್ಲಿ ಒಂದು ಹದೀಸ್ ಆಯಿಷಾ (ರ) ರಿಂದ ಸಹೀಹ್ ಗ್ರಂಥದಲ್ಲಿ ದೃಢಪಟ್ಟಿದೆ. ಪ್ರವಾದಿ (ಸ) ರವರು ಹೇಳಿದರು:

«خُلِقَتِ الـمَلَائِكَةُ مِن نُورٍ، وَخُلِقَ الجَانُّ مِنْ مَارِجٍ مِنْ نَارٍ، وَخُلِقَ آدَمُ مِمَّا وُصِفَ لَكُم».

"ದೇವದೂತರುಗಳನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ, ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಲಾಗಿದೆ, ಮತ್ತು ಆದಮರನ್ನು ನಿಮಗೆ ವರ್ಣಿಸಲಾದುದರಿಂದ ಸೃಷ್ಟಿಸಲಾಗಿದೆ."13 ಇದನ್ನು ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ವರದಿ ಮಾಡಿದ್ದಾರೆ.

ಮೂರನೆಯ ಮೂಲತತ್ವ: ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಇದು ಸಹ ಎರಡು ವಿಷಯಗಳನ್ನು ಒಳಗೊಂಡಿದೆ:

ಮೊದಲನೆಯ ವಿಷಯ: ಗ್ರಂಥಗಳಲ್ಲಿ ಒಟ್ಟಾರೆಯಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹು ತನ್ನ ಹಕ್ಕುಗಳನ್ನು ವಿವರಿಸಲು ಮತ್ತು ಅದರ ಕಡೆಗೆ ಆಹ್ವಾನಿಸಲು ತನ್ನ ಪ್ರವಾದಿಗಳು ಮತ್ತು ಸಂದೇಶವಾಹಕರಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ ಎಂದು ವಿಶ್ವಾಸವಿಡುವುದು. ಅಲ್ಲಾಹು ಹೇಳುತ್ತಾನೆ:

﴿لَقَدۡ أَرۡسَلۡنَا رُسُلَنَا بِٱلۡبَيِّنَٰتِ وَأَنزَلۡنَا مَعَهُمُ ٱلۡكِتَٰبَ وَٱلۡمِيزَانَ لِيَقُومَ ٱلنَّاسُ بِٱلۡقِسۡطِ...﴾

“ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರನ್ನು ಸ್ಪಷ್ಟ ಪುರಾವೆಗಳೊಂದಿಗೆ ಕಳುಹಿಸಿದ್ದೇವೆ ಮತ್ತು ಅವರೊಂದಿಗೆ ಗ್ರಂಥ ಮತ್ತು ತಕ್ಕಡಿಯನ್ನು ಅವತೀರ್ಣಗೊಳಿಸಿದ್ದೇವೆ. ಜನರು ನ್ಯಾಯವನ್ನು ಎತ್ತಿಹಿಡಿಯುವುದಕ್ಕಾಗಿ.” [ಅಲ್-ಹದೀದ್: 25]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿كَانَ ٱلنَّاسُ أُمَّةٗ وَٰحِدَةٗ فَبَعَثَ ٱللَّهُ ٱلنَّبِيِّـۧنَ مُبَشِّرِينَ وَمُنذِرِينَ وَأَنزَلَ مَعَهُمُ ٱلۡكِتَٰبَ بِٱلۡحَقِّ لِيَحۡكُمَ بَيۡنَ ٱلنَّاسِ فِيمَا ٱخۡتَلَفُواْ فِيهِ...﴾

“ಮಾನವರು ಒಂದೇ ಸಮುದಾಯವಾಗಿದ್ದರು. ನಂತರ ಅಲ್ಲಾಹು ಪ್ರವಾದಿಗಳನ್ನು ಶುಭವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಕಳುಹಿಸಿದನು. ಮತ್ತು ಅವರೊಂದಿಗೆ ಸತ್ಯಸಹಿತವಾದ ಗ್ರಂಥವನ್ನು ಅವತೀರ್ಣಗೊಳಿಸಿದನು. ಜನರು ಭಿನ್ನಾಭಿಪ್ರಾಯ ಹೊಂದಿದ್ದ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡುವುದಕ್ಕಾಗಿ.” [ಅಲ್-ಬಕರ: 213].

ಎರಡನೆಯ ವಿಷಯ: ಗ್ರಂಥಗಳಲ್ಲಿ ವಿವರಣಾತ್ಮಕವಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹು ವಿವರಿಸಿ ಹೇಳಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ ತೌರಾತ್, ಇಂಜೀಲ್, ಝಬೂರ್ ಮತ್ತು ಕುರ್‌ಆನ್. ಕುರ್‌ಆನ್ ಅವುಗಳ ಪೈಕಿ ಶ್ರೇಷ್ಠವೂ, ಅಂತಿಮವೂ ಆಗಿದೆ. ಅದು ಅವುಗಳ ಮೇಲ್ವಿಚಾರಣೆ ಮಾಡುತ್ತದೆ, ಮತ್ತು ಅವುಗಳನ್ನು ದೃಢೀಕರಿಸುತ್ತದೆ ಎಂದು ವಿಶ್ವಾಸವಿಡುವುದು. ಅದನ್ನು ಮತ್ತು ಅದರ ಜೊತೆಗೆ ಅಲ್ಲಾಹನ ಸಂದೇಶವಾಹಕರಿಂದ (ಸ) ಬಂದಿರುವ ಸಹೀಹಾದ ಸುನ್ನತ್ತನ್ನು ಅನುಸರಿಸುವುದು ಮತ್ತು ಅದರ ತೀರ್ಪಿಗೆ ಬದ್ಧರಾಗಿರುವುದು ಸಂಪೂರ್ಣ ಮನುಕುಲದ ಮೇಲೆ ಕಡ್ಡಾಯವಾಗಿದೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ತನ್ನ ಸಂದೇಶವಾಹಕರಾದ ಮುಹಮ್ಮದ್ (ಸ) ರನ್ನು ಸಂಪೂರ್ಣ ಜಿನ್ನ್ ಮತ್ತು ಮಾನವರಿಗೆ ಸಂದೇಶವಾಹಕರಾಗಿ ಕಳುಹಿಸಿದನು, ಮತ್ತು ಅವರ ನಡುವೆ ಇದರ ಮೂಲಕ ಅವರು ತೀರ್ಪು ನೀಡುವುದಕ್ಕಾಗಿ ಅವರಿಗೆ ಈ ಕುರ್‌ಆನ್ ಅನ್ನು ಅವತೀರ್ಣಗೊಳಿಸಿದನು. ಅವನು ಇದನ್ನು (ಕುರ್‌ಆನನ್ನು) ಹೃದಯಗಳಲ್ಲಿರುವುದಕ್ಕೆ ಚಿಕಿತ್ಸೆಯಾಗಿ, ಪ್ರತಿಯೊಂದು ವಿಷಯಕ್ಕೂ ವಿವರಣೆಯಾಗಿ, ಮತ್ತು ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಹಾಗೂ ಕರುಣೆಯಾಗಿ ಮಾಡಿದನು. ಅಲ್ಲಾಹು ಹೇಳುತ್ತಾನೆ:

﴿وَهَٰذَا كِتَٰبٌ أَنزَلۡنَٰهُ مُبَارَكٞ فَٱتَّبِعُوهُ وَٱتَّقُواْ لَعَلَّكُمۡ تُرۡحَمُونَ155﴾

“ಮತ್ತು ಇದು ನಾವು ಅವತೀರ್ಣಗೊಳಿಸಿದ ಅನುಗ್ರಹೀತವಾದ ಗ್ರಂಥ. ಆದ್ದರಿಂದ ಇದನ್ನು ಅನುಸರಿಸಿರಿ ಮತ್ತು (ಅಲ್ಲಾಹನನ್ನು) ಭಯಪಡಿರಿ. ನಿಮ್ಮ ಮೇಲೆ ಕರುಣೆ ತೋರಲ್ಪಡಬಹುದು.” [ಅಲ್-ಅನ್‌ಆಮ್: 155]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَنَزَّلۡنَا عَلَيۡكَ ٱلۡكِتَٰبَ تِبۡيَٰنٗا لِّكُلِّ شَيۡءٖ وَهُدٗى وَرَحۡمَةٗ وَبُشۡرَىٰ لِلۡمُسۡلِمِينَ﴾

“ಮತ್ತು ನಾವು ನಿಮ್ಮ ಮೇಲೆ ಈ ಗ್ರಂಥವನ್ನು ಪ್ರತಿಯೊಂದಕ್ಕೂ ವಿವರಣೆಯಾಗಿ, ಮಾರ್ಗದರ್ಶನವಾಗಿ, ಕರುಣೆಯಾಗಿ ಮತ್ತು ಮುಸಲ್ಮಾನರಿಗೆ ಶುಭವಾರ್ತೆಯಾಗಿ ಅವತೀರ್ಣಗೊಳಿಸಿದ್ದೇವೆ.” [ಅನ್ನಹ್ಲ್: 89]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلۡ يَٰٓأَيُّهَا ٱلنَّاسُ إِنِّي رَسُولُ ٱللَّهِ إِلَيۡكُمۡ جَمِيعًا ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۖ لَآ إِلَٰهَ إِلَّا هُوَ يُحۡيِۦ وَيُمِيتُۖ فَـَٔامِنُواْ بِٱللَّهِ وَرَسُولِهِ ٱلنَّبِيِّ ٱلۡأُمِّيِّ ٱلَّذِي يُؤۡمِنُ بِٱللَّهِ وَكَلِمَٰتِهِۦ وَٱتَّبِعُوهُ لَعَلَّكُمۡ تَهۡتَدُونَ158﴾

“ಹೇಳಿರಿ: ‘ಓ ಮಾನವರೇ, ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಕಡೆಗೆ ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. (ಅಂದರೆ) ಆಕಾಶಗಳ ಮತ್ತು ಭೂಮಿಯ ಸಾರ್ವಭೌಮತ್ವವು ಯಾರಿಗೆ ಸೇರಿದೆಯೋ ಅವನ (ಸಂದೇಶವಾಹಕ). ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವ ನೀಡುತ್ತಾನೆ ಮತ್ತು ಮರಣ ನೀಡುತ್ತಾನೆ. ಆದ್ದರಿಂದ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಾದ—ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ನಿರಕ್ಷರಿ ಪ್ರವಾದಿಯಲ್ಲಿ ವಿಶ್ವಾಸವಿಡಿರಿ, ಮತ್ತು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗವನ್ನು ಪಡೆಯಬಹುದು’.” [ಅಲ್-ಅಅ್‌ರಾಫ್: 158]. ಇದೇ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ನಾಲ್ಕನೆಯ ಮೂಲತತ್ವ: ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು

ಇದು ಸಹ ಎರಡು ವಿಷಯಗಳನ್ನು ಒಳಗೊಂಡಿದೆ: ಮೊದಲನೆಯ ವಿಷಯ: ಸಂದೇಶವಾಹಕರಲ್ಲಿ ಒಟ್ಟಾರೆಯಾಗಿ ವಿಶ್ವಾಸವಿಡುವುದು. ಅಂದರೆ, ಸರ್ವಶಕ್ತನಾದ ಅಲ್ಲಾಹು ತನ್ನ ದಾಸರ ಬಳಿಗೆ ಅವರಲ್ಲೇ ಕೆಲವರನ್ನು ಶುಭವಾರ್ತೆ ನೀಡುವವರಾಗಿ, ಮುನ್ನೆಚ್ಚರಿಕೆ ನೀಡುವವರಾಗಿ ಮತ್ತು ಸತ್ಯದ ಕಡೆಗೆ ಆಹ್ವಾನಿಸುವವರಾಗಿ ಸಂದೇಶವಾಹಕರನ್ನು ಕಳುಹಿಸಿದ್ದಾನೆ ಎಂದು ವಿಶ್ವಾಸವಿಡುವುದು. ಯಾರು ಅವರ ಕರೆಗೆ ಉತ್ತರಿಸುತ್ತಾರೋ ಅವರು ಸೌಭಾಗ್ಯವನ್ನು ಪಡೆಯುತ್ತಾರೆ, ಮತ್ತು ಯಾರು ಅವರನ್ನು ವಿರೋಧಿಸುತ್ತಾರೋ ಅವರು ನಷ್ಟ ಮತ್ತು ವಿಷಾದವನ್ನು ಅನುಭವಿಸುತ್ತಾರೆ. ಅವರಲ್ಲಿ ಕಟ್ಟಕಡೆಯವರು ಮತ್ತು ಅತಿಶ್ರೇಷ್ಠರು ನಮ್ಮ ಪ್ರವಾದಿಯಾದ ಮುಹಮ್ಮದ್ ಬಿನ್ ಅಬ್ದುಲ್ಲಾ (ಸ) ರವರಾಗಿದ್ದಾರೆ. ಅಲ್ಲಾಹು ಹೇಳುತ್ತಾನೆ:

﴿وَلَقَدۡ بَعَثۡنَا فِي كُلِّ أُمَّةٖ رَّسُولًا أَنِ ٱعۡبُدُواْ ٱللَّهَ وَٱجۡتَنِبُواْ ٱلطَّٰغُوتَ...﴾

“ಮತ್ತು ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯದಲ್ಲೂ ಒಬ್ಬ ಸಂದೇಶವಾಹಕನನ್ನು ಕಳುಹಿಸಿದ್ದೇವೆ (ಈ ಆದೇಶದೊಂದಿಗೆ): ‘ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್‌ನಿಂದ (ಮಿಥ್ಯದೇವರುಗಳಿಂದ) ದೂರವಿರಿ’.” [ಅನ್ನಹ್ಲ್: 36]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿رُّسُلٗا مُّبَشِّرِينَ وَمُنذِرِينَ لِئَلَّا يَكُونَ لِلنَّاسِ عَلَى ٱللَّهِ حُجَّةُۢ بَعۡدَ ٱلرُّسُلِ...﴾

“ಶುಭವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ (ಕಳುಹಿಸಲಾದ) ಸಂದೇಶವಾಹಕರು. ಸಂದೇಶವಾಹಕರ ನಂತರ ಜನರಿಗೆ ಅಲ್ಲಾಹನ ವಿರುದ್ಧ ಯಾವುದೇ ಪುರಾವೆ ಇಲ್ಲದಿರುವುದಕ್ಕಾಗಿ.” [ಅನ್ನಿಸಾ: 165]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿مَّا كَانَ مُحَمَّدٌ أَبَآ أَحَدٖ مِّن رِّجَالِكُمۡ وَلَٰكِن رَّسُولَ ٱللَّهِ وَخَاتَمَ ٱلنَّبِيِّـۧنَ...﴾

“ಮುಹಮ್ಮದ್ ನಿಮ್ಮ ಪುರುಷರಲ್ಲಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳ ಮುದ್ರೆ (ಅಂತಿಮ ಪ್ರವಾದಿ) ಆಗಿರುವರು.” [ಅಲ್-ಅಹ್‌ಝಾಬ್:40]

ಎರಡನೆಯ ವಿಷಯ: ಸಂದೇಶವಾಹಕರಲ್ಲಿ ವಿವರಣಾತ್ಮಕವಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹು ಹೆಸರು ಹೇಳಿದ ಅಥವಾ ಅಲ್ಲಾಹನ ಸಂದೇಶವಾಹಕರಿಂದ (ಸ) ಹೆಸರು ದೃಢಪಟ್ಟಿರುವ ಸಂದೇಶವಾಹಕರಲ್ಲಿ ನಾವು ವಿವರಣಾತ್ಮಕವಾಗಿ ಮತ್ತು ನಿರ್ದಿಷ್ಟವಾಗಿ ವಿಶ್ವಾಸವಿಡುವುದು. ಉದಾಹರಣೆಗೆ ನೂಹ್, ಹೂದ್, ಸಾಲಿಹ್, ಇಬ್ರಾಹೀಮ್ ಮುಂತಾದವರು (ಅವರ ಮೇಲೆ, ಅವರ ಕುಟುಂಬ ಮತ್ತು ಅನುಯಾಯಿಗಳ ಮೇಲೆ ಅಲ್ಲಾಹನ ಶಾಂತಿಯಿರಲಿ).

ಐದನೆಯ ಮೂಲತತ್ವ: ಅಂತ್ಯದಿನದಲ್ಲಿ ವಿಶ್ವಾಸವಿಡುವುದು

ಇದು (ಈ ವಿಷಯಗಳನ್ನು) ಒಳಗೊಂಡಿದೆ:

ಮರಣದ ನಂತರ ಸಂಭವಿಸುವ, ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಸ) ತಿಳಿಸಿದ ಪ್ರತಿಯೊಂದು ವಿಷಯದಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ ಸಮಾಧಿಯ ಪರೀಕ್ಷೆ, ಅದರ ಶಿಕ್ಷೆ ಮತ್ತು ಸುಖ, ಕಿಯಾಮತ್ (ಪುನರುತ್ಥಾನ) ದಿನದ ಭಯಾನಕತೆಗಳು, ಕಷ್ಟಗಳು, ಸಿರಾತ್ (ಸೇತುವೆ), ಮೀಝಾನ್ (ತಕ್ಕಡಿ), ಹಿಸಾಬ್ (ವಿಚಾರಣೆ), ಜಝಾಅ್ (ಪ್ರತಿಫಲ), ಮತ್ತು ಜನರ ನಡುವೆ ಕರ್ಮಪತ್ರಗಳನ್ನು ಹಂಚುವುದು—ಕೆಲವರು ತಮ್ಮ ಕರ್ಮಪತ್ರವನ್ನು ತಮ್ಮ ಬಲಗೈಯಲ್ಲಿ ಪಡೆಯುತ್ತಾರೆ, ಕೆಲವರು ತಮ್ಮ ಎಡಗೈಯಲ್ಲಿ ಅಥವಾ ತಮ್ಮ ಬೆನ್ನಿನ ಹಿಂದಿನಿಂದ ಪಡೆಯುತ್ತಾರೆ.

ಇದರಲ್ಲಿ ಸೇರುವ ಇತರ ವಿಷಯಗಳೆಂದರೆ, ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಹೌಝ್ (ನೀರಿನ ಕೊಳ)ದಲ್ಲಿ ವಿಶ್ವಾಸವಿಡುವುದು, ಸ್ವರ್ಗ ಮತ್ತು ನರಕದಲ್ಲಿ ವಿಶ್ವಾಸವಿಡುವುದು, ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನಾದ ಅಲ್ಲಾಹನನ್ನು ನೋಡುತ್ತಾರೆ, ಅವನು ಅವರೊಂದಿಗೆ ಮಾತನಾಡುತ್ತಾನೆ ಮುಂತಾದ ಪವಿತ್ರ ಕುರ್‌ಆನ್ ಹಾಗೂ ಅಲ್ಲಾಹನ ಸಂದೇಶವಾಹಕರಿಂದ (ಸ) ಬಂದಿರುವ ಸಹೀಹಾದ ಸುನ್ನತ್‌ನಲ್ಲಿ ವರದಿಯಾಗಿರುವ ಇತರ ವಿಷಯಗಳಲ್ಲಿ ವಿಶ್ವಾಸವಿಡುವುದು. ದಾಸನು ಇವೆಲ್ಲವನ್ನೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಸ) ವಿವರಿಸಿದ ರೀತಿಯಲ್ಲಿ ವಿಶ್ವಾಸವಿಡುವುದು ಮತ್ತು ದೃಢೀಕರಿಸುವುದು ಕಡ್ಡಾಯವಾಗಿದೆ.

 

ಆರನೆಯ ಮೂಲತತ್ವ: ಕದ್ರ್ (ವಿಧಿ) ಯಲ್ಲಿ ವಿಶ್ವಾಸವಿಡುವುದು

ಇದು ನಾಲ್ಕು ವಿಷಯಗಳಲ್ಲಿ ವಿಶ್ವಾಸವಿಡುವುದನ್ನು ಒಳಗೊಂಡಿದೆ:

ಮೊದಲನೆಯ ವಿಷಯ: ಸರ್ವಶಕ್ತನಾದ ಅಲ್ಲಾಹು ಏನಾಗಿತ್ತು ಮತ್ತು ಏನಾಗುತ್ತದೆ (ಭೂತ ಮತ್ತು ಭವಿಷ್ಯ) ಎಂಬುದನ್ನು ತಿಳಿದಿದ್ದಾನೆ, ಮತ್ತು ತನ್ನ ದಾಸರ ಸ್ಥಿತಿಗತಿಗಳು, ಅವರ ಜೀವನೋಪಾಯ, ಅವರ ಆಯುಷ್ಯ, ಅವರ ಕರ್ಮಗಳು ಮತ್ತು ಅವರ ಇತರ ಎಲ್ಲಾ ವಿಷಯಗಳನ್ನು ತಿಳಿದಿದ್ದಾನೆ ಎಂದು ವಿಶ್ವಾಸವಿಡುವುದು. ಇವುಗಳಲ್ಲಿ ಯಾವುದೂ ಸರ್ವಶಕ್ತನಾದ ಅಲ್ಲಾಹನಿಗೆ ಮರೆಯಾಗಿಲ್ಲ. ಅಲ್ಲಾಹು ಹೇಳುತ್ತಾನೆ:

﴿...وَٱعۡلَمُوٓاْ أَنَّ ٱللَّهَ بِكُلِّ شَيۡءٍ عَلِيمٞ﴾

“ಮತ್ತು ಅಲ್ಲಾಹು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದಾನೆಂದು ಅರಿತುಕೊಳ್ಳಿ.” [ಅಲ್-ಬಕರ: 231]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...لِتَعۡلَمُوٓاْ أَنَّ ٱللَّهَ عَلَىٰ كُلِّ شَيۡءٖ قَدِيرٞ وَأَنَّ ٱللَّهَ قَدۡ أَحَاطَ بِكُلِّ شَيۡءٍ عِلۡمَۢا﴾

“ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು ಮತ್ತು ಅಲ್ಲಾಹು ಪ್ರತಿಯೊಂದು ವಿಷಯವನ್ನೂ ತನ್ನ ಜ್ಞಾನದಿಂದ ಆವರಿಸಿಕೊಂಡಿದ್ದಾನೆಂದು ನೀವು ತಿಳಿಯುವುದಕ್ಕಾಗಿ.” [ಅತ್ತಲಾಕ್: 12]

ಎರಡನೆಯ ವಿಷಯ: ಅಲ್ಲಾಹು ತಾನು ನಿರ್ಣಯಿಸಿದ ಮತ್ತು ವಿಧಿಸಿದ ಪ್ರತಿಯೊಂದನ್ನೂ ಬರೆದಿಟ್ಟಿದ್ದಾನೆ ಎಂದು ವಿಶ್ವಾಸವಿಡುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قَدۡ عَلِمۡنَا مَا تَنقُصُ ٱلۡأَرۡضُ مِنۡهُمۡۖ وَعِندَنَا كِتَٰبٌ حَفِيظُۢ 4﴾

“ಭೂಮಿಯು ಅವರಿಂದ ಏನು ಕಡಿಮೆ ಮಾಡುತ್ತದೆ ಎಂಬುದು ನಮಗೆ ತಿಳಿದಿದೆ. ಮತ್ತು ನಮ್ಮ ಬಳಿ ಸುರಕ್ಷಿತವಾದ ಗ್ರಂಥವಿದೆ.” [ಕ್ವಾಫ್: 4]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَكُلَّ شَيۡءٍ أَحۡصَيۡنَٰهُ فِيٓ إِمَامٖ مُّبِينٖ﴾

“ಮತ್ತು ನಾವು ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾದ ಇಮಾಮ್ (ಗ್ರಂಥ) ನಲ್ಲಿ ದಾಖಲಿಸಿದ್ದೇವೆ.” [ಯಾಸೀನ್: 12]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿أَلَمۡ تَعۡلَمۡ أَنَّ ٱللَّهَ يَعۡلَمُ مَا فِي ٱلسَّمَآءِ وَٱلۡأَرۡضِۚ إِنَّ ذَٰلِكَ فِي كِتَٰبٍۚ إِنَّ ذَٰلِكَ عَلَى ٱللَّهِ يَسِيرٞ70﴾

“ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನೆಲ್ಲಾ ಅಲ್ಲಾಹನು ತಿಳಿದಿದ್ದಾನೆಂದು ನಿಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದು ಒಂದು ಗ್ರಂಥದಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸುಲಭವಾಗಿದೆ.” [ಅಲ್-ಹಜ್ಜ್: 70].

ಮೂರನೆಯ ವಿಷಯ: ಸರ್ವಶಕ್ತನಾದ ಅಲ್ಲಾಹನ ಜಾರಿಗೆ ಬರುವ (ಚಾಲ್ತಿಗೆ ಬರುವ) ಇಚ್ಛೆಯಲ್ಲಿ ವಿಶ್ವಾಸವಿಡುವುದು. ಅವನು ಇಚ್ಛಿಸಿದ್ದು ಸಂಭವಿಸುತ್ತದೆ, ಮತ್ತು ಅವನು ಇಚ್ಛಿಸದೇ ಇರುವುದು ಸಂಭವಿಸುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...إِنَّ ٱللَّهَ يَفۡعَلُ مَا يَشَآءُ﴾

“ನಿಶ್ಚಯವಾಗಿಯೂ ಅಲ್ಲಾಹು ತಾನು ಇಚ್ಛಿಸಿದ್ದನ್ನು ಮಾಡುತ್ತಾನೆ.” [ಅಲ್-ಹಜ್ಜ್: 18]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّمَآ أَمۡرُهُۥٓ إِذَآ أَرَادَ شَيۡـًٔا أَن يَقُولَ لَهُۥ كُن فَيَكُونُ82﴾

“ನಿಶ್ಚಯವಾಗಿಯೂ ಅವನ ಆಜ್ಞೆಯು, ಅವನು ಯಾವುದೇ ವಿಷಯವನ್ನು ಬಯಸಿದಾಗ, ಅದಕ್ಕೆ ‘ಆಗು’ ಎಂದು ಹೇಳುವುದು ಮಾತ್ರವಾಗಿದೆ. ಆಗ ಅದು ಆಗಿಬಿಡುತ್ತದೆ.” [ಯಾಸೀನ್: 82]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلۡعَٰلَمِينَ29﴾

“ಮತ್ತು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದ ಹೊರತು ನೀವು ಇಚ್ಛಿಸಲಾರಿರಿ.” [ಅತ್ತಕ್ವೀರ್: 29].

ನಾಲ್ಕನೆಯ ವಿಷಯ: ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ಅಲ್ಲಾಹನೇ ಸೃಷ್ಟಿಸಿದ್ದಾನೆ ಎಂದು ವಿಶ್ವಾಸವಿಡುವುದು. ಅವನ ಹೊರತು ಬೇರೆ ಸೃಷ್ಟಿಕರ್ತನಿಲ್ಲ, ಮತ್ತು ಅವನ ಹೊರತು ಬೇರೆ ಪರಿಪಾಲಕನಿಲ್ಲ. ಸರ್ವಶಕ್ತನು ಹೇಳುತ್ತಾನೆ:

﴿ٱللَّهُ خَٰلِقُ كُلِّ شَيۡءٖۖ وَهُوَ عَلَىٰ كُلِّ شَيۡءٖ وَكِيلٞ62﴾

“ಅಲ್ಲಾಹು ಪ್ರತಿಯೊಂದರ ಸೃಷ್ಟಿಕರ್ತನು; ಮತ್ತು ಅವನು ಪ್ರತಿಯೊಂದರ ಮೇಲ್ವಿಚಾರಕನು.” [ಅಝ್ಝುಮರ್:62]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلنَّاسُ ٱذۡكُرُواْ نِعۡمَتَ ٱللَّهِ عَلَيۡكُمۡۚ هَلۡ مِنۡ خَٰلِقٍ غَيۡرُ ٱللَّهِ يَرۡزُقُكُم مِّنَ ٱلسَّمَآءِ وَٱلۡأَرۡضِۚ لَآ إِلَٰهَ إِلَّا هُوَۖ فَأَنَّىٰ تُؤۡفَكُونَ3﴾

“ಓ ಮಾನವರೇ, ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನ ಹೊರತು ನಿಮಗೆ ಆಕಾಶದಿಂದ ಮತ್ತು ಭೂಮಿಯಿಂದ ಆಹಾರವನ್ನು ನೀಡುವ ಬೇರೆ ಸೃಷ್ಟಿಕರ್ತನು ಇದ್ದಾನೆಯೇ? ಅವನ ಹೊರತು ಬೇರೆ ಯಾವ ಆರಾಧ್ಯನೂ ಇಲ್ಲ. ಹಾಗಿದ್ದೂ ನೀವು ಎಲ್ಲಿ ದಾರಿತಪ್ಪಿಸಲ್ಪಡುತ್ತಿದ್ದೀರಿ?” [ಫಾತಿರ್: 3].

ಆದ್ದರಿಂದ, ಕದ್ರ್ (ವಿಧಿ) ನಲ್ಲಿರುವ ವಿಶ್ವಾಸವು ಈ ಎಲ್ಲಾ ನಾಲ್ಕು ವಿಷಯಗಳಲ್ಲಿರುವ ವಿಶ್ವಾಸವನ್ನು ಒಳಗೊಂಡಿದೆ. ಇದು ಅಹ್ಲುಸ್ಸುನ್ನ ವಲ್-ಜಮಾಅ ದವರ ವಿಶ್ವಾಸವಾಗಿದೆ. ಇದಕ್ಕೆ ವಿರುದ್ಧವಾಗಿ ಕೆಲವನ್ನು ನಿರಾಕರಿಸುವ ಬಿದ್ಅತ್ (ಧರ್ಮದಲ್ಲಿ ಹೊಸ ಆವಿಷ್ಕಾರ ಮಾಡುವವರು) ನವರಿದ್ದಾರೆ.

ಅಹ್ಲುಸ್ಸುನ್ನ ದವರು ವಿಶ್ವಾಸವಿಡುವ ಸರಿಯಾದ ವಿಶ್ವಾಸದ (ಅಕೀದದ) ಪ್ರಮುಖ ವಿಷಯಗಳಲ್ಲಿ ಒಳಪಡುವ ಇತರ ವಿಷಯಗಳೆಂದರೆ: ಅಲ್ಲಾಹನಿಗಾಗಿ ಪ್ರೀತಿಸುವುದು ಮತ್ತು ಅಲ್ಲಾಹನಿಗಾಗಿ ದ್ವೇಷಿಸುವುದು, ಹಾಗೂ ಅಲ್ಲಾಹನಿಗಾಗಿ ಸ್ನೇಹ ಬೆಳೆಸುವುದು ಮತ್ತು ಅಲ್ಲಾಹನಿಗಾಗಿ ವೈರತ್ವ ಸಾಧಿಸುವುದು. ಇದುವೇ 'ಅಲ್-ವಲಾ ವಲ್-ಬರಾ' (ನಿಷ್ಠೆ ಮತ್ತು ವಿಮುಕ್ತತೆ) ಯ ವಿಶ್ವಾಸವಾಗಿದೆ. ಇದು ಸರ್ವಶಕ್ತನಾದ ಅಲ್ಲಾಹನಲ್ಲಿರುವ ವಿಶ್ವಾಸದ ಒಂದು ಭಾಗವಾಗಿದೆ.

ಆದ್ದರಿಂದ, ಸತ್ಯವಿಶ್ವಾಸಿಯು ಸತ್ಯವಿಶ್ವಾಸಿಗಳನ್ನು ಪ್ರೀತಿಸುತ್ತಾನೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸುತ್ತಾನೆ. ಸತ್ಯನಿಷೇಧಿಗಳನ್ನು ದ್ವೇಷಿಸುತ್ತಾನೆ ಮತ್ತು ಅವರೊಂದಿಗೆ ವೈರತ್ವ ಸಾಧಿಸುತ್ತಾನೆ. ಈ ಉಮ್ಮತ್‌ನ (ಸಮುದಾಯದ) ಸತ್ಯವಿಶ್ವಾಸಿಗಳಲ್ಲಿ ಅಗ್ರಗಣ್ಯರು ಅಲ್ಲಾಹನ ಸಂದೇಶವಾಹಕರ (ಸ) ಸಹಚರರು (ಸಹಾಬಿಗಳು) ಆಗಿದ್ದಾರೆ. ಇದು ಅಹ್ಲುಸ್ಸುನ್ನ ವಲ್-ಜಮಾಅ ದವರಲ್ಲಿ ದೃಢೀಕರಣಗೊಂಡ ವಿಷಯವಾಗಿದೆ. ಅವರು ಅವರನ್ನು (ಸಹಾಬಿಗಳನ್ನು) ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸುತ್ತಾರೆ. ಪ್ರವಾದಿಗಳ ನಂತರ ಅವರೇ ಅತಿಶ್ರೇಷ್ಠ ಜನರು ಎಂದು ವಿಶ್ವಾಸವಿಡುತ್ತಾರೆ. ಪ್ರವಾದಿ (ಸ) ರವರು ಹೇಳಿದರು:

«خَيْرُ القُرُونِ قَرْنِي ثُمَّ الَّذِينَ يَلُونَهُمْ ثُمَّ الَّذِينَ يَلُونَهُم».

"ಶತಮಾನಗಳಲ್ಲಿ ಅತ್ಯುತ್ತಮವಾದುದು ನನ್ನ ಶತಮಾನ, ನಂತರ ಅವರನ್ನು ಅನುಸರಿಸುವವರು, ನಂತರ ಅವರನ್ನು ಅನುಸರಿಸುವವರು."14 [ಬುಖಾರಿ ಮತ್ತು ಮುಸ್ಲಿಂ]،.

ಮತ್ತು ಅವರಲ್ಲಿ (ಸಹಾಬಿಗಳಲ್ಲಿ) ಅತಿಶ್ರೇಷ್ಠರು ಅಬೂ ಬಕರ್ ಸಿದ್ದೀಕ್, ನಂತರ ಉಮರ್ ಅಲ್-ಫಾರೂಕ್, ನಂತರ ಉಸ್ಮಾನ್ ಝುನ್ನೂರೈನ್, ನಂತರ ಅಲಿ ಅಲ್-ಮುರ್ತಝಾ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ), ನಂತರ (ಸ್ವರ್ಗದ ಶುಭವಾರ್ತೆ ಪಡೆದ) ಹತ್ತು ಜನರಲ್ಲಿ ಉಳಿದವರು, ನಂತರ ಇತರ ಸಹಾಬಿಗಳು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಎಂದು ಅವರು ವಿಶ್ವಾಸವಿಡುತ್ತಾರೆ. ಅವರ (ಸಹಾಬಿಗಳ) ನಡುವೆ ಸಂಭವಿಸಿದ ಭಿನ್ನಾಭಿಪ್ರಾಯಗಳ ಬಗ್ಗೆ ಅವರು ಮೌನವಹಿಸುತ್ತಾರೆ, ಮತ್ತು ಆ ವಿಷಯದಲ್ಲಿ ಅವರು (ಸಹಾಬಿಗಳು) 'ಮುಜ್ತಹಿದ್' ಗಳಾಗಿದ್ದು, ಅವರ ಪೈಕಿ ಸರಿಯಾದ ತೀರ್ಮಾನ ಕೈಗೊಂಡವರಿಗೆ ಎರಡು ಪ್ರತಿಫಲಗಳು ಮತ್ತು ತಪ್ಪಾದ ತೀರ್ಮಾನ ಕೈಗೊಂಡವರಿಗೆ ಒಂದು ಪ್ರತಿಫಲ ಇರುವುದು ಎಂದು ಅವರು ವಿಶ್ವಾಸವಿಡುತ್ತಾರೆ.

ಅವರು ಅಲ್ಲಾಹನ ಸಂದೇಶವಾಹಕರ (ಸ) ಕುಟುಂಬದವರಲ್ಲಿ ಸೇರಿದ ಸತ್ಯವಿಶ್ವಾಸಿಗಳನ್ನು ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸುತ್ತಾರೆ. ಹಾಗೆಯೇ, ಅಲ್ಲಾಹನ ಸಂದೇಶವಾಹಕರ (ಸ) ಪತ್ನಿಯರಾದ ಸತ್ಯವಿಶ್ವಾಸಿಗಳ ಮಾತೆಯರೊಂದಿಗೆ ಸ್ನೇಹ ಬೆಳೆಸುತ್ತಾರೆ ಮತ್ತು ಅವರೆಲ್ಲರ ಮೇಲೂ ಅಲ್ಲಾಹನ ಸಂಪ್ರೀತಿ ಇರಲೆಂದು ಪ್ರಾರ್ಥಿಸುತ್ತಾರೆ. ಅಲ್ಲಾಹನ ಸಂದೇಶವಾಹಕರ (ಸ) ಸಹಚರರನ್ನು (ಸಹಾಬಿಗಳನ್ನು) ದ್ವೇಷಿಸುವ ಮತ್ತು ನಿಂದಿಸುವ, ಹಾಗೂ ಅಹ್ಲುಲ್-ಬೈತ್ (ಪ್ರವಾದಿ ಕುಟುಂಬ) ಬಗ್ಗೆ ಅತಿರೇಕವಾಗಿ ವರ್ತಿಸಿ, ಸರ್ವಶಕ್ತನಾದ ಅಲ್ಲಾಹು ಅವರಿಗೆ ನೀಡಿದ ಸ್ಥಾನಮಾನಕ್ಕಿಂತ ಅವರನ್ನು ಉನ್ನತೀಕರಿಸುವ ರವಾಫಿದ್ (ಶಿಯಾ) ಪಂಗಡದ ಮಾರ್ಗದಿಂದ ಅವರು ದೂರವಿರುತ್ತಾರೆ. ಹಾಗೆಯೇ, ಮಾತು ಅಥವಾ ಕ್ರಿಯೆಯ ಮೂಲಕ ಅಹ್ಲುಲ್-ಬೈತ್‌ಗೆ ನೋವುಂಟುಮಾಡುವ ನವಾಸಿಬ್ ಪಂಗಡದ ಮಾರ್ಗದಿಂದಲೂ ಅವರು ದೂರವಿರುತ್ತಾರೆ.

ನಾವು ಇಲ್ಲಿಯವರೆಗೆ ಉಲ್ಲೇಖಿಸಿದ್ದೆಲ್ಲವೂ, ಅಲ್ಲಾಹು ತನ್ನ ಸಂದೇಶವಾಹಕರಾದ ಮುಹಮ್ಮದ್ (ಸ) ರೊಂದಿಗೆ ಕಳುಹಿಸಿದ ಸರಿಯಾದ ವಿಶ್ವಾಸದಲ್ಲಿ ಒಳಪಡುತ್ತವೆ. ಇದುವೇ ನಾವು ವಿಶ್ವಾಸವಿಡಬೇಕಾದ, ದೃಢವಾಗಿ ಹಿಡಿದುಕೊಳ್ಳಬೇಕಾದ, ಅದರ ಮೇಲೆ ಸ್ಥಿರವಾಗಿರಬೇಕಾದ ಮತ್ತು ಅದಕ್ಕೆ ವಿರುದ್ಧವಾದುದರ ಬಗ್ಗೆ ಎಚ್ಚರವಾಗಿರಬೇಕಾದ ವಿಶ್ವಾಸವಾಗಿದೆ. ಇದುವೇ ವಿಜಯಶಾಲಿ ಪಂಗಡವಾದ ಅಹ್ಲುಸ್ಸುನ್ನ ವಲ್-ಜಮಾಅ ದವರ ವಿಶ್ವಾಸವಾಗಿದೆ. ಆ ಪಂಗಡದ ಬಗ್ಗೆ ಪ್ರವಾದಿ (ಸ) ರವರು ಹೇಳಿದರು:

«لَا تَـزَالُ طَائِفَةٌ مِنْ أُمَّتِي ‌ظَاهِرِينَ ‌عَلَى ‌الحَقِّ، لَا يَضُرُّهُمْ مَنْ خَذَلَهُمْ، حَتَّى يَأْتِيَ أَمْرُ اللهِ وَهُمْ كَذَلِكَ».

ನನ್ನ ಉಮ್ಮತ್‌ನ (ಸಮುದಾಯದ) ಒಂದು ಗುಂಪು ಸತ್ಯದ ಮೇಲೆ ಯಾವಾಗಲೂ ಪ್ರಕಟವಾಗುತ್ತಲೇ ಇರುತ್ತಾರೆ. ಅವರನ್ನು ಕೈಬಿಡುವವರಿಂದ ಅವರಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲಾಹನ ಆದೇಶ ಬರುವವರೆಗೂ ಅವರು ಹಾಗೆಯೇ ಇರುತ್ತಾರೆ."15 ಇನ್ನೊಂದು ವರದಿಯಲ್ಲಿ:

«لَا تَزَالُ طَائِفَةٌ مِنْ أُمَّتِي عَلَى الحَقِّ مَنْصُورَةٌ».

"ನನ್ನ ಉಮ್ಮತ್‌ನ (ಸಮುದಾಯದ) ಒಂದು ಗುಂಪು ಸತ್ಯದ ಮೇಲೆ ಯಾವಾಗಲೂ ಸಹಾಯ ಪಡೆಯುತ್ತಲೇ ಇರುತ್ತಾರೆ."16 ಪ್ರವಾದಿ (ಸ) ರವರು ಹೇಳಿದರು:

«افْتَرَقَتِ اليَهُودُ عَلَى إِحْدَى وَسَبْعِينَ فِرْقَةً، وَافْتَرَقَتِ النَّصَارَى عَلَى اثْنَتَيْنِ وَسَبْعِينَ فِرْقَةً، وَسَتَفْتَرِقُ هَذِهِ الأُمَّةُ عَلَى ثَلَاثِ وَسَبْعِينَ فِرْقَةً كُلُّهَا فِي النَّارِ إِلَّا وَاحِدَةً فَقَالَ الصَّحَابَةُ: مَنْ هِيَ يَا رَسُولَ اللهِ؟ قَالَ: مَنْ كَانَ عَلَى مِثْلِ مَا أَنَا عَلَيْهِ وَأَصْحَابِي».

"ಯಹೂದಿಗಳು ಎಪ್ಪತ್ತೊಂದು ಪಂಗಡಗಳಾಗಿ ಒಡೆದುಹೋದರು. ಕ್ರೈಸ್ತರು ಎಪ್ಪತ್ತೆರಡು ಪಂಗಡಗಳಾಗಿ ಒಡೆದುಹೋದರು. ಈ ಉಮ್ಮತ್ (ಮುಸ್ಲಿಮ್ ಸಮುದಾಯ) ಎಪ್ಪತ್ಮೂರು ಪಂಗಡಗಳಾಗಿ ಒಡೆದುಹೋಗುವರು. ಒಂದನ್ನು ಹೊರತುಪಡಿಸಿ ಉಳಿದುದೆಲ್ಲವೂ ನರಕದಲ್ಲಿರುತ್ತವೆ." ಸಹಾಬಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅದು ಯಾರು?" ಅವರು ಹೇಳಿದರು: "ನಾನು ಮತ್ತು ನನ್ನ ಸಹಚರರು ಇರುವ ಮಾರ್ಗದಲ್ಲಿ ಇರುವವರು."17

ಸರಿಯಾದ ವಿಶ್ವಾಸಕ್ಕೆ (ಅಕೀದಕ್ಕೆ) ವಿರುದ್ಧವಾದ ವಿಶ್ವಾಸಗಳು

ಈ ವಿಶ್ವಾಸದಿಂದ ತಪ್ಪಿದವರು ಮತ್ತು ಅದಕ್ಕೆ ವಿರುದ್ಧವಾಗಿ ಸಾಗುವವರಲ್ಲಿ ಅನೇಕ ವರ್ಗಗಳಿವೆ. ಅವರಲ್ಲಿ ವಿಗ್ರಹಗಳು, ಮೂರ್ತಿಗಳು, ದೇವದೂತರು, ಔಲಿಯಾಗಳು (ಸಂತರು), ಜಿನ್ನ್‌ಗಳು, ಮರಗಳು, ಕಲ್ಲುಗಳು ಮತ್ತು ಇತರ ವಸ್ತುಗಳನ್ನು ಪೂಜಿಸುವವರಿದ್ದಾರೆ. ಇವರು ಸಂದೇಶವಾಹಕರುಗಳ ಆಹ್ವಾನಕ್ಕೆ ಸ್ಪಂದಿಸಲಿಲ್ಲ. ಬದಲಿಗೆ ಅವರನ್ನು ವಿರೋಧಿಸಿದರು ಮತ್ತು ಹಠಮಾರಿತನ ತೋರಿದರು. ನಮ್ಮ ಪ್ರವಾದಿ ಮುಹಮ್ಮದ್ (ಸ) ರೊಂದಿಗೆ ಖುರೈಷರು ಮತ್ತು ಅರಬರ ವಿವಿಧ ಪಂಗಡಗಳು ಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಅವರು ಬಯಕೆಗಳನ್ನು ಪೂರೈಸಲು, ರೋಗಿಗಳನ್ನು ಗುಣಪಡಿಸಲು ಮತ್ತು ಶತ್ರುಗಳ ವಿರುದ್ಧ ಸಹಾಯ ಮಾಡಲು ತಮ್ಮ ಆರಾಧ್ಯ ದೇವರುಗಳೊಂದಿಗೆ ಬೇಡಿಕೊಳ್ಳುತ್ತಿದ್ದರು, ಅವರಿಗಾಗಿ ಬಲಿ ಅರ್ಪಿಸುತ್ತಿದ್ದರು ಮತ್ತು ಹರಕೆ ಹೊರುತ್ತಿದ್ದರು. ಅಲ್ಲಾಹನ ಸಂದೇಶವಾಹಕರು (ಸ) ಇದನ್ನು ಖಂಡಿಸಿದಾಗ ಮತ್ತು ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಲು ಅವರಿಗೆ ಆದೇಶಿಸಿದಾಗ, ಅವರು ಆಶ್ಚರ್ಯಚಕಿತರಾದರು ಮತ್ತು ಅದನ್ನು ನಿರಾಕರಿಸಿದರು. ಅವರು ಹೇಳಿದರು:

﴿أَجَعَلَ ٱلۡأٓلِهَةَ إِلَٰهٗا وَٰحِدًاۖ إِنَّ هَٰذَا لَشَيۡءٌ عُجَابٞ5﴾

“ಅವರು (ಮುಹಮ್ಮದ್) ಎಲ್ಲಾ ದೇವರುಗಳನ್ನು ಒಂದೇ ದೇವರನ್ನಾಗಿ ಮಾಡಿದ್ದಾರೆಯೇ? ನಿಶ್ಚಯವಾಗಿಯೂ ಇದು ಆಶ್ಚರ್ಯಕರ ವಿಷಯವಾಗಿದೆ!” [ಸ್ವಾದ್: 5].

ಅಲ್ಲಾಹನ ಸಂದೇಶವಾಹಕರು (ಸ) ಅವರನ್ನು ಅಲ್ಲಾಹನ ಕಡೆಗೆ ಆಹ್ವಾನಿಸುತ್ತಲೇ ಇದ್ದರು, ಶಿರ್ಕ್‌ನ ಬಗ್ಗೆ ಅವರನ್ನು ಎಚ್ಚರಿಸುತ್ತಿದ್ದರು, ಮತ್ತು ಅವರನ್ನು ಯಾವುದಕ್ಕೆ ಆಹ್ವಾನಿಸುತ್ತಿದ್ದರೋ ಅದರ ವಾಸ್ತವಿಕತೆಯನ್ನು ಅವರಿಗೆ ವಿವರಿಸಿಕೊಡುತ್ತಿದ್ದರು. ಕೊನೆಗೆ, ಅಲ್ಲಾಹು ಅವರಲ್ಲಿ ಕೆಲವರಿಗೆ ಮಾರ್ಗದರ್ಶನ ನೀಡಿದನು, ನಂತರ ಅವರು ಗುಂಪು ಗುಂಪಾಗಿ ಅಲ್ಲಾಹನ ಧರ್ಮವನ್ನು ಪ್ರವೇಶಿಸಿದರು. ಹೀಗೆ, ಅಲ್ಲಾಹನ ಸಂದೇಶವಾಹಕರು (ಸ) ಮತ್ತು ಅವರ ಸಹಚರರು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸಿದವರ ನಿರಂತರ ಆಹ್ವಾನ ಮತ್ತು ದೀರ್ಘಕಾಲದ ಹೋರಾಟದ ಬಳಿಕ ಅಲ್ಲಾಹನ ಧರ್ಮವು ಇತರ ಎಲ್ಲಾ ಧರ್ಮಗಳ ಮೇಲೆ ಪ್ರಾಬಲ್ಯ ಸಾಧಿಸಿತು. ನಂತರ ಪರಿಸ್ಥಿತಿಗಳು ಬದಲಾದವು, ಮತ್ತು ಬಹುಸಂಖ್ಯಾತ ಜನರ ಮೇಲೆ ಅಜ್ಞಾನವು ಹತೋಟಿಯನ್ನು ಸಾಧಿಸಿತು. ಹೀಗೆ ಹೆಚ್ಚಿನವರು ಪ್ರವಾದಿಗಳು ಮತ್ತು ಔಲಿಯಾಗಳ ಬಗ್ಗೆ ಅತಿರೇಕದಿಂದ ವರ್ತಿಸುವುದು, ಅವರನ್ನು ಪ್ರಾರ್ಥಿಸುವುದು, ಅವರಿಂದ ಸಹಾಯ ಯಾಚಿಸುವುದು ಮತ್ತು ಇತರ ಶಿರ್ಕ್‌ನ ಪ್ರಬೇಧಗಳನ್ನು ಮಾಡುವ ಮೂಲಕ ಜಾಹಿಲಿಯ್ಯದ (ಅಜ್ಞಾನದ ಕಾಲದ) ಧರ್ಮಕ್ಕೆ ಮರಳಿದರು. "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂಬುದರ ಅರ್ಥವನ್ನು ಅರಬ್ ಸತ್ಯನಿಷೇಧಿಗಳು ಅರ್ಥಮಾಡಿಕೊಂಡಂತೆ ಇವರು ಅರ್ಥಮಾಡಿಕೊಳ್ಳಲಿಲ್ಲ. ಅಲ್ಲಾಹನೇ ಸಹಾಯ ಮಾಡುವವನು.

ಪ್ರವಾದಿತ್ವದ ಯುಗದಿಂದ ದೂರವಾದ ಕಾರಣ ಮತ್ತು ಅಜ್ಞಾನವು ಹೆಚ್ಚಾದ ಕಾರಣ ಈ ಶಿರ್ಕ್ ನಮ್ಮ ಕಾಲದವರೆಗೂ ಜನರಲ್ಲಿ ಹರಡುತ್ತಲೇ ಇದೆ.

ಇಂದಿನವರ ಸಂದೇಹವು ಹಿಂದಿನವರ ಸಂದೇಹವೇ ಆಗಿದೆ. ಅದು ಅವರು ಹೇಳುವ ಈ ಮಾತು:

﴿...هَٰٓؤُلَآءِ شُفَعَٰٓؤُنَا عِندَ ٱللَّهِ...﴾

“ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸುಗಾರರಾಗಿದ್ದಾರೆ.” [ಯೂನುಸ್: 18]. ಮತ್ತು ಅವರ ಈ ಮಾತು:

﴿...مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ...﴾

“ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸಲು ಮಾತ್ರ ನಾವು ಅವರನ್ನು ಆರಾಧಿಸುತ್ತೇವೆ.” [ಅಝ್ಝುಮರ್: 3] ಅಲ್ಲಾಹು ಈ ಸಂದೇಹವನ್ನು ನಿರರ್ಥಕಗೊಳಿಸಿದ್ದಾನೆ ಮತ್ತು ಯಾರು ತನ್ನನ್ನು ಬಿಟ್ಟು ಬೇರೆಯವರನ್ನು ಆರಾಧಿಸುತ್ತಾರೋ, ಅವರು ಯಾರೇ ಆಗಿರಲಿ, ಅವರು ತನ್ನೊಂದಿಗೆ ಶಿರ್ಕ್ ಮಾಡಿದ್ದಾರೆ ಮತ್ತು ಕುಫ್ರ್ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾನೆ. ಅಲ್ಲಾಹು ಹೇಳುತ್ತಾನೆ:

﴿وَيَعۡبُدُونَ مِن دُونِ ٱللَّهِ مَا لَا يَضُرُّهُمۡ وَلَا يَنفَعُهُمۡ وَيَقُولُونَ هَٰٓؤُلَآءِ شُفَعَٰٓؤُنَا عِندَ ٱللَّهِ...﴾

“ಮತ್ತು ಅವರು ಅಲ್ಲಾಹನ ಹೊರತು, ತಮಗೆ ಹಾನಿ ಮತ್ತು ಲಾಭ ಮಾಡಲಾರದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ‘ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರು’ ಎಂದು ಹೇಳುತ್ತಾರೆ.” [ಯೂನುಸ್: 18]. ಆಗ ಅಲ್ಲಾಹು ಅವರಿಗೆ ಹೀಗೆ ಉತ್ತರಿಸಿದನು:

﴿قُلۡ أَتُنَبِّـُٔونَ ٱللَّهَ بِمَا لَا يَعۡلَمُ فِي ٱلسَّمَٰوَٰتِ وَلَا فِي ٱلۡأَرۡضِۚ سُبۡحَٰنَهُۥ وَتَعَٰلَىٰ عَمَّا يُشۡرِكُونَ18﴾

“ಹೇಳಿರಿ: ‘ಆಕಾಶಗಳಲ್ಲಿ ಅಥವಾ ಭೂಮಿಯಲ್ಲಿ ಅಲ್ಲಾಹನಿಗೆ ತಿಳಿದಿಲ್ಲದ ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ?’ ಅವನು ಪರಿಶುದ್ಧನು ಮತ್ತು ಅವರು ಸಹಭಾಗಿಯನ್ನಾಗಿ ಮಾಡುವುದರಿಂದ ಅವನು ಅತ್ಯುನ್ನತನಾಗಿದ್ದಾನೆ.” [ಯೂನುಸ್: 18].

ಈ ವಚನದಲ್ಲಿ ಅಲ್ಲಾಹು ಸ್ಪಷ್ಟಪಡಿಸುವುದೇನೆಂದರೆ, ಅಲ್ಲಾಹನ ಹೊರತಾದ ಪ್ರವಾದಿಗಳು, ಔಲಿಯಾಗಳು ಅಥವಾ ಇತರರನ್ನು ಆರಾಧಿಸುವುದು ದೊಡ್ಡ ಶಿರ್ಕ್ ಆಗಿದೆ. ಅದನ್ನು ಮಾಡುವವರು ಅದಕ್ಕೆ ಬೇರೆ ಹೆಸರಿಟ್ಟರೂ ಸಹ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ...﴾

ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಮಾಡಿಕೊಂಡವರು ಹೇಳುತ್ತಾರೆ: “ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಕಾರಣದಿಂದಾಗಿದೆ.” [ಅಝ್ಝುಮರ್: 3] ನಂತರ ಸರ್ವಶಕ್ತನಾದ ಅಲ್ಲಾಹು ಅವರ ಮಾತಿಗೆ ಹೀಗೆ ಉತ್ತರಿಸಿದನು:

﴿...إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ﴾

"ನಿಶ್ಚಯವಾಗಿಯೂ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಅಲ್ಲಾಹು ಅವರ ನಡುವೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳುಗಾರ ಮತ್ತು ಕೃತಘ್ನನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ.” [ಅಝ್ಝುಮರ್: 3]

ಇದರಿಂದ ಸರ್ವಶಕ್ತನಾದ ಅಲ್ಲಾಹು ಸ್ಪಷ್ಟಪಡಿಸಿಕೊಡುವುದೇನೆಂದರೆ, ಪ್ರಾರ್ಥನೆ, ಭಯ, ನಿರೀಕ್ಷೆ, ಮತ್ತು ಇತರ ರೂಪಗಳಲ್ಲಿ ಅವನ ಹೊರತಾಗಿ ಇತರರನ್ನು ಆರಾಧಿಸುವುದು ಅವನನ್ನು ನಿಷೇಧಿಸುವುದಾಗಿದೆ. ತಮ್ಮ ಆರಾಧ್ಯ ದೇವರುಗಳು ತಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸುತ್ತಾರೆ ಎಂದು ಅವರು ಹೇಳುವ ಮಾತು ಸುಳ್ಳೆಂದು ಕೂಡ ಅವನು ಸ್ಪಷ್ಟಪಡಿಸಿದ್ದಾನೆ.

ಸರಿಯಾದ ವಿಶ್ವಾಸಕ್ಕೆ (ಅಕೀದಕ್ಕೆ) ವಿರುದ್ಧವಾದ ಮತ್ತು ಪ್ರವಾದಿಗಳು (ಅವರ ಮೇಲೆ ಶಾಂತಿಯಿರಲಿ) ತಂದಿರುವ ಬೋಧನೆಗಳಿಗೆ ವಿರುದ್ಧವಾದ ಸತ್ಯನಿಷೇಧದ ವಿಶ್ವಾಸಗಳಲ್ಲಿ ಸತ್ಯನಿಷೇಧದ ಪ್ರಚಾರಕರಾದ ಮಾರ್ಕ್ಸ್, ಲೆನಿನ್, ಮತ್ತು ಇತರ ನಾಸ್ತಿಕ ಮುಖಂಡರ ಅನುಯಾಯಿಗಳು ವಿಶ್ವಾಸವಿಡುವವುಗಳು ಕೂಡ ಒಳಪಡುತ್ತವೆ. ಅವರು ಅದನ್ನು ಸಮಾಜವಾದ, ಕಮ್ಯುನಿಸಂ, ಬಾಥಿಸಂ ಅಥವಾ ಇತರ ಯಾವುದೇ ಹೆಸರಿನಿಂದ ಕರೆದರೂ ಸಹ. ಈ ನಾಸ್ತಿಕರ ಪ್ರಮುಖ ಮೂಲತತ್ವವು: "ದೇವರಿಲ್ಲ ಮತ್ತು ಜೀವನವೇ ಎಲ್ಲ" ಎಂಬುದಾಗಿದೆ.

ಅವರ ಮೂಲತತ್ವಗಳಲ್ಲಿ, ಪರಲೋಕವನ್ನು ನಿರಾಕರಿಸುವುದು, ಸ್ವರ್ಗ ಮತ್ತು ನರಕವನ್ನು ನಿರಾಕರಿಸುವುದು, ಮತ್ತು ಎಲ್ಲಾ ಧರ್ಮಗಳನ್ನು ನಿರಾಕರಿಸುವುದು ಒಳಪಡುತ್ತವೆ. ಅವರ ಪುಸ್ತಕಗಳನ್ನು ಓದುವವರು ಮತ್ತು ಅವರು ಇರುವ ಸ್ಥಿತಿಯನ್ನು ಅಧ್ಯಯನ ಮಾಡುವವರು ಇದನ್ನು ಖಚಿತವಾಗಿ ತಿಳಿದುಕೊಳ್ಳುತ್ತಾರೆ. ಈ ವಿಶ್ವಾಸವು ಎಲ್ಲಾ ದೈವಿಕ ಧರ್ಮಗಳಿಗೆ ವಿರುದ್ಧವಾಗಿದೆ ಮತ್ತು ಅದರ ಅನುಯಾಯಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಅತ್ಯಂತ ಕೆಟ್ಟ ಪರಿಣಾಮಗಳಿಗೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸತ್ಯಕ್ಕೆ ವಿರುದ್ಧವಾದ ಆ ವಿಶ್ವಾಸಗಳಲ್ಲಿ ಇನ್ನೊಂದು ಏನೆಂದರೆ ಕೆಲವು ಸೂಫಿಗಳು ಹೊಂದಿರುವ ವಿಶ್ವಾಸ. ಅವರು (ಸೂಫಿಗಳು) 'ಔಲಿಯಾ' ಎಂದು ಕರೆಯುವ ಕೆಲವರು ಜಗತ್ತಿನ ನಿಯಂತ್ರಣದಲ್ಲಿ ಅಲ್ಲಾಹನೊಂದಿಗೆ ಪಾಲುದಾರರಾಗಿದ್ದಾರೆ ಮತ್ತು ಅವರು ಜಗತ್ತಿನ ಆಗು-ಹೋಗುಗಳನ್ನು ನಿಯಂತ್ರಿಸುತ್ತಾರೆ ಎಂದು ಅವರು ನಂಬುತ್ತಾರೆ. ಅವರು ಅವರನ್ನು 'ಅಕ್ತಾಬ್', 'ಔತಾದ್', 'ಅಗ್‌ವಾಸ್' ಮತ್ತು ತಮ್ಮ ಆರಾಧ್ಯ ದೇವರುಗಳಿಗಾಗಿ ಅವರು ಸೃಷ್ಟಿಸಿದ ಇತರ ಹೆಸರುಗಳಿಂದ ಕರೆಯುತ್ತಾರೆ. ಇದು ರುಬೂಬಿಯ್ಯತ್‌ನಲ್ಲಿ (ಪ್ರಭುತ್ವದಲ್ಲಿ) ಮಾಡುವ ಶಿರ್ಕ್ ಆಗಿದ್ದು, ಇದು ಸರ್ವಶಕ್ತನಾದ ಅಲ್ಲಾಹನೊಂದಿಗೆ ಮಾಡುವ ಶಿರ್ಕ್‌ನ ಅತ್ಯಂತ ಕೆಟ್ಟ ಪ್ರಕಾರಗಳಲ್ಲಿ ಒಂದಾಗಿದೆ.

ಹಿಂದಿನ ಜಾಹಿಲಿಯ್ಯ ಕಾಲದವರ ಶಿರ್ಕ್ ಅನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಇಂದಿನವರಲ್ಲಿ ಹರಡಿರುವ ಶಿರ್ಕ್‌ನೊಂದಿಗೆ ಹೋಲಿಸಿ ನೋಡಿದರೆ, ಇಂದಿನವರ ಶಿರ್ಕ್ ಹೆಚ್ಚು ಗಂಭೀರ ಮತ್ತು ವ್ಯಾಪಕವಾಗಿದೆ ಎಂದು ಕಂಡುಕೊಳ್ಳಬಹುದು. ಇದರ ವಿವರಣೆ ಈ ಕೆಳಗಿನಂತಿದೆ: ಜಾಹಿಲಿಯ್ಯ ಕಾಲದ (ಅಜ್ಞಾನದ ಕಾಲ) ಅರಬ್ಬರಲ್ಲಿದ್ದ ಸತ್ಯನಿಷೇಧಿಗಳು ಎರಡು ವಿಷಯಗಳಲ್ಲಿ ಬೇರ್ಪಟ್ಟು ನಿಲ್ಲುತ್ತಾರೆ: ಮೊದಲನೆಯ ವಿಷಯ: ಅವರು ರುಬೂಬಿಯ್ಯತ್‌ನಲ್ಲಿ (ಅಲ್ಲಾಹನ ಪ್ರಭುತ್ವದಲ್ಲಿ) ಶಿರ್ಕ್ ಮಾಡುತ್ತಿರಲಿಲ್ಲ. ಬದಲಿಗೆ ಅವರು ಶಿರ್ಕ್ ಮಾಡುತ್ತಿದ್ದದ್ದು ಇಬಾದತ್‌ನಲ್ಲಿ (ಆರಾಧನೆಯಲ್ಲಿ) ಮಾತ್ರ. ಅವರು ಸರ್ವಶಕ್ತನಾದ ಅಲ್ಲಾಹನೊಬ್ಬನೇ ಜಗತ್ತಿನ ಪರಿಪಾಲಕ (ರಬ್ಬ್) ಎಂದು ಒಪ್ಪಿಕೊಂಡಿದ್ದರು. ಅಲ್ಲಾಹು ಹೇಳುತ್ತಾನೆ:

﴿وَلَئِن سَأَلۡتَهُم مَّنۡ خَلَقَهُمۡ لَيَقُولُنَّ ٱللَّهُ...﴾

“ಮತ್ತು ನೀವು ಅವರೊಡನೆ, ‘ನಿಮ್ಮನ್ನು ಸೃಷ್ಟಿಸಿದ್ದು ಯಾರು?’ ಎಂದು ಕೇಳಿದರೆ, ಅವರು ಖಂಡಿತವಾಗಿಯೂ ‘ಅಲ್ಲಾಹು’ ಎಂದು ಹೇಳುತ್ತಾರೆ.” [ಅಝ್ಝುಖ್ರುಫ್: 87]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلۡ مَن يَرۡزُقُكُم مِّنَ ٱلسَّمَآءِ وَٱلۡأَرۡضِ أَمَّن يَمۡلِكُ ٱلسَّمۡعَ وَٱلۡأَبۡصَٰرَ وَمَن يُخۡرِجُ ٱلۡحَيَّ مِنَ ٱلۡمَيِّتِ وَيُخۡرِجُ ٱلۡمَيِّتَ مِنَ ٱلۡحَيِّ وَمَن يُدَبِّرُ ٱلۡأَمۡرَۚ فَسَيَقُولُونَ ٱللَّهُۚ فَقُلۡ أَفَلَا تَتَّقُونَ31﴾

“ಹೇಳಿರಿ: ‘ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಆಹಾರವನ್ನು ನೀಡುವವರು ಯಾರು? ಅಥವಾ ಶ್ರವಣ ಮತ್ತು ದೃಷ್ಟಿಯನ್ನು ಒಡೆತನದಲ್ಲಿಟ್ಟುಕೊಂಡವರು ಯಾರು? ಮತ್ತು ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವರು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತೆಗೆಯುವವರು ಯಾರು? ಮತ್ತು ವಿಷಯಗಳನ್ನು ನಿಯಂತ್ರಿಸುವವರು ಯಾರು?’ ಆಗ ಅವರು ‘ಅಲ್ಲಾಹು’ ಎಂದು ಹೇಳುತ್ತಾರೆ. ಆಗ ಹೇಳಿರಿ: ‘ಹಾಗಾದರೆ ನೀವು ದೇವಭಯವುಳ್ಳವರಾಗುವುದಿಲ್ಲವೇ?’” [ಯೂನುಸ್: 31]. ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ಎರಡನೆಯ ವಿಷಯ: ಅವರು ಆರಾಧನೆಯಲ್ಲಿ ಯಾವಾಗಲೂ ಶಿರ್ಕ್ ಮಾಡುತ್ತಿರಲಿಲ್ಲ. ಬದಲಿಗೆ ಅದು ಸುಖ-ಸಂತೋಷದ ಸಮಯದಲ್ಲಿ ಮಾತ್ರ ಸಂಭವಿಸುತ್ತಿತ್ತು. ಆದರೆ ಕಷ್ಟದ ಸಮಯದಲ್ಲಿ ಅವರು ಅಲ್ಲಾಹನಿಗೆ ನಿಷ್ಕಳಂಕವಾಗಿ ಆರಾಧನೆ ಸಲ್ಲಿಸುತ್ತಿದ್ದರು. ಅಲ್ಲಾಹು ಹೇಳುತ್ತಾನೆ:

﴿فَإِذَا رَكِبُواْ فِي ٱلۡفُلۡكِ دَعَوُاْ ٱللَّهَ مُخۡلِصِينَ لَهُ ٱلدِّينَ فَلَمَّا نَجَّىٰهُمۡ إِلَى ٱلۡبَرِّ إِذَا هُمۡ يُشۡرِكُونَ65﴾

“ಅವರು ಹಡಗಿನಲ್ಲಿ ಸವಾರಿ ಮಾಡಿದರೆ, ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ಆದರೆ ಅವನು ಅವರನ್ನು ದಡಕ್ಕೆ ಸುರಕ್ಷಿತವಾಗಿ ತಲುಪಿಸಿದರೆ, ಆಗ ಅವರು ಶಿರ್ಕ್ ಮಾಡಲು ಪ್ರಾರಂಭಿಸುತ್ತಾರೆ.” [ಅಲ್-ಅಂಕಬೂತ್: 65].

ಆದರೆ ಇಂದಿನ ಮುಶ್ರಿಕರು (ಶಿರ್ಕ್ ಮಾಡುವವರು) ಎರಡು ವಿಷಯಗಳಲ್ಲಿ ಹಿಂದಿನವರಿಗಿಂತ ಮೇಲಿದ್ದಾರೆ: ಮೊದಲನೆಯ ವಿಷಯ: ಅವರಲ್ಲಿ ಕೆಲವರು ರುಬೂಬಿಯ್ಯತ್‌ನಲ್ಲಿಯೂ ಶಿರ್ಕ್ ಮಾಡುತ್ತಾರೆ. ಎರಡನೆಯ ವಿಷಯ: ಅವರು ಕಷ್ಟ-ಸುಖಗಳ ಎರಡು ಸ್ಥಿತಿಗಳಲ್ಲೂ ಶಿರ್ಕ್ ಮಾಡುತ್ತಾರೆ. ಅವರೊಂದಿಗೆ ಬೆರೆಯುವವರಿಗೆ ಮತ್ತು ಅವರ ಸ್ಥಿತಿಗತಿಗಳನ್ನು ಪರಿಶೀಲಿಸಿದವರಿಗೆ ಇದು ತಿಳಿದಿದೆ. ಹಾಗೆಯೇ. ಈಜಿಪ್ಟ್‌ನಲ್ಲಿ ಹುಸೈನ್ ಮತ್ತು ಬದವಿಯವರ ಸಮಾಧಿಗಳ ಬಳಿ, ಏಡನ್‌ನಲ್ಲಿ ಐದ್ರೂಸ್ ರವರ ಸಮಾಧಿಯ ಬಳಿ, ಯಮನ್‌ನಲ್ಲಿ ಹಾದಿ ಯವರ ಸಮಾಧಿಯ ಬಳಿ, ಶಾಮ್‌ನಲ್ಲಿ ಇಬ್ನ್ ಅರಬಿ ಯವರ ಸಮಾಧಿಯ ಬಳಿ, ಇರಾಕ್‌ನಲ್ಲಿ ಶೈಖ್ ಅಬ್ದುಲ್ ಖಾದಿರ್ ಜೀಲಾನಿ ಯವರ ಸಮಾಧಿಯ ಬಳಿ, ಮತ್ತು ಇತರ ಪ್ರಸಿದ್ಧ ಸಮಾಧಿಗಳ ಬಳಿ ಅವರು ಏನು ಮಾಡುತ್ತಾರೆಂದು ನೋಡಿದವರಿಗೆ ತಿಳಿದಿದೆ. ಈ ಸಮಾಧಿಗಳ ವಿಷಯದಲ್ಲಿ ಸಾಮಾನ್ಯ ಜನರು ಅತಿರೇಕವಾಗಿ ವರ್ತಿಸುತ್ತಾರೆ ಮತ್ತು ಅಲ್ಲಾಹನಿಗೆ ಸಲ್ಲಬೇಕಾದ ಹೆಚ್ಚಿನ ಹಕ್ಕುಗಳನ್ನು ಅವುಗಳಿಗೆ ಅರ್ಪಿಸುತ್ತಾರೆ. ಇದನ್ನು ಖಂಡಿಸುವವರು ಮತ್ತು ಅಲ್ಲಾಹು ತನ್ನ ಪ್ರವಾದಿ ಮುಹಮ್ಮದ್ (ಸ) ರನ್ನು ಹಾಗೂ ಅವರಿಗಿಂತ ಹಿಂದಿನ ಸಂದೇಶವಾಹಕರನ್ನು (ಅವರ ಮೇಲೆ ಶಾಂತಿಯಿರಲಿ) ಕಳುಹಿಸಿದ ತೌಹೀದ್‌ನ ನಿಜಸ್ಥಿತಿಯನ್ನು ಅವರಿಗೆ ವಿವರಿಸಿಕೊಡುವವರು ಬಹಳ ಕಡಿಮೆ. ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್ (ನಿಶ್ಚಯವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ಅವನ ಬಳಿಗೆ ಮರಳುವವರು).

ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಸರಿಯಾದ ವಿಶ್ವಾಸಕ್ಕೆ ವಿರುದ್ಧವಾದ ವಿಶ್ವಾಸಗಳಲ್ಲಿ ಇನ್ನೊಂದು ಏನೆಂದರೆ: ಜಹ್ಮಿಯ್ಯ, ಮುಅ್‌ತಝಿಲ, ಮತ್ತು ಅಲ್ಲಾಹನ ಗುಣಲಕ್ಷಣಗಳನ್ನು ನಿರಾಕರಿಸುವ, ಅಲ್ಲಾಹನ ಬಗ್ಗೆ ಹೇಳಲಾದ ಪರಿಪೂರ್ಣತೆಯ ಗುಣಲಕ್ಷಣಗಳನ್ನು ನಿಷ್ಕ್ರಿಯಗೊಳಿಸುವ, ಮತ್ತು ಅವನನ್ನು ಇಲ್ಲದಿರುವ, ನಿರ್ಜೀವ ಮತ್ತು ಅಸಾಧ್ಯವಾದವುಗಳ ಗುಣಲಕ್ಷಣಗಳಿಂದ ವರ್ಣಿಸುವವರ ಮಾರ್ಗವನ್ನು ಅನುಸರಿಸಿದ ಬಿದ್ಅತ್ತಿನ ಜನರ ವಿಶ್ವಾಸಗಳು ಸೇರಿವೆ. ಅಲ್ಲಾಹು ಅವರ ಮಾತುಗಳಿಂದೆಲ್ಲಾ ಅತ್ಯಂತ ಉನ್ನತನಾಗಿದ್ದಾನೆ.

ಕೆಲವು ಗುಣಲಕ್ಷಣಗಳನ್ನು ನಿರಾಕರಿಸಿ ಇತರ ಕೆಲವು ಗುಣಲಕ್ಷಣಗಳನ್ನು ದೃಢೀಕರಿಸುವವರೂ ಇದರಲ್ಲಿ ಒಳಪಡುತ್ತಾರೆ. ಇದು ಅಶ್ಅರಿಗಳ ವಿಶ್ವಾಸವಾಗಿದೆ. ಇವರು ಯಾವ ಹೋಲಿಕೆಯನ್ನು ಭಯಪಟ್ಟು ಪಲಾಯನ ಮಾಡುವುದಕ್ಕಾಗಿ ಕೆಲವು ಗುಣಲಕ್ಷಣಗಳನ್ನು ನಿರಾಕರಿಸಿದರೋ ಮತ್ತು ಕೆಲವು ಗುಣಲಕ್ಷಣಗಳ ಪುರಾವೆಗಳನ್ನು ದುರ್ವ್ಯಾಖ್ಯಾನ ಮಾಡಿದರೋ, ಅದೇ ಹೋಲಿಕೆಗೆ ತಾವು ದೃಢೀಕರಿಸಿದ ಗುಣಲಕ್ಷಣಗಳ ವಿಷಯದಲ್ಲಿಯೂ ಬದ್ಧರಾಗಬೇಕಾದ ಅನಿವಾರ್ಯತೆಗೆ ತಲುಪಿದ್ದಾರೆ. ಹೀಗಾಗಿ ಅವರು ಶ್ರವಣ (ಪಾರಂಪರಿಕ) ಮತ್ತು ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾದರು ಮತ್ತು ಈ ವಿಷಯದಲ್ಲಿ ಸ್ಪಷ್ಟವಾದ ವಿರೋಧಾಭಾಸದಲ್ಲಿ ಸಿಲುಕಿದರು.

ಆದರೆ, ಈಗಾಗಲೇ ವಿವರಿಸಿದಂತೆ, ಅಹ್ಲುಸ್ಸುನ್ನ ವಲ್-ಜಮಾಅದವರು ಸರ್ವಶಕ್ತನಾದ ಅಲ್ಲಾಹನಿಗೆ, ಅವನು ತನಗಾಗಿ ದೃಢೀಕರಿಸಿದ, ಅಥವಾ ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರು ಅವನಿಗಾಗಿ ದೃಢೀಕರಿಸಿದ ನಾಮಗಳು ಮತ್ತು ಗುಣಲಕ್ಷಣಗಳನ್ನು ಪರಿಪೂರ್ಣವಾದ ರೀತಿಯಲ್ಲಿ ದೃಢೀಕರಿಸಿದರು, ಮತ್ತು ಅವನನ್ನು ನಿಷ್ಕ್ರಿಯತೆಯ ಕಳಂಕದಿಂದ ಮುಕ್ತಗೊಳಿಸುವ ರೀತಿಯಲ್ಲಿ ಸೃಷ್ಟಿಗಳ ಹೋಲಿಕೆಯಿಂದ ಪರಿಶುದ್ಧಗೊಳಿಸಿದರು. ಹೀಗೆ ಅವರು ಎಲ್ಲಾ ಪುರಾವೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದರು ಮತ್ತು ಯಾವುದನ್ನೂ ದುರ್ವ್ಯಾಖ್ಯಾನ ಮಾಡದೆ ಅಥವಾ ನಿಷ್ಕ್ರಿಯಗೊಳಿಸದೆ, ಇತರರು ಸಿಲುಕಿದ ಎಲ್ಲಾ ವಿರೋಧಾಭಾಸಗಳಿಂದ ಸುರಕ್ಷಿತರಾದರು.

ಇದುವೇ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿರುವ ಮೋಕ್ಷ ಮತ್ತು ಸೌಭಾಗ್ಯದ ಮಾರ್ಗ. ಇದುವೇ ಈ ಉಮ್ಮತ್‌ನ (ಸಮುದಾಯದ) ಸಜ್ಜನ ಪೂರ್ವಜರು ಮತ್ತು ಇಮಾಮ್‌ಗಳು ಅನುಸರಿಸಿದ ನೇರವಾದ ಮಾರ್ಗ. ಈ ಸಮುದಾಯದ ಮೊದಲಿನವರು ಯಾವುದರಿಂದ ಸುಧಾರಿಸಲ್ಪಟ್ಟರೋ ಅದರಿಂದಲ್ಲದೆ ಈ ಸಮುದಾಯದ ನಂತರದವರು ಸುಧಾರಿಸಲಾರರು. ಅದು ಕುರ್‌ಆನ್ ಮತ್ತು ಸುನ್ನತ್ ಅನ್ನು ಅನುಸರಿಸುವುದು ಮತ್ತು ಅವೆರಡಕ್ಕೂ ವಿರುದ್ಧವಾದುದನ್ನು ತ್ಯಜಿಸುವುದು ಮಾತ್ರವಾಗಿದೆ. ಅವನು ಈ ಸಮುದಾಯವನ್ನು ಅದರ ಸರಿಯಾದ ಮಾರ್ಗದತ್ತ ಮರಳಿಸಲಿ, ಅದರಲ್ಲಿ ಸನ್ಮಾರ್ಗಕ್ಕೆ ಕರೆಯುವ ದಾಯಿಗಳನ್ನು ಹೆಚ್ಚಿಸಲಿ, ಮತ್ತು ಅದರ ಮುಖಂಡರು ಹಾಗೂ ವಿದ್ವಾಂಸರಿಗೆ ಶಿರ್ಕ್‌ನೊಂದಿಗೆ ಹೋರಾಡಲು, ಅದನ್ನು ನಿರ್ಮೂಲನೆ ಮಾಡಲು ಮತ್ತು ಅದರ ಕಡೆಗೆ ಒಯ್ಯುವ ಮಾಧ್ಯಮಗಳ ಬಗ್ಗೆ ಜನರನ್ನು ಎಚ್ಚರಿಸಲು ಅನುಗ್ರಹಿಸಲಿ ಎಂದು ನಾವು ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ... ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ಅತ್ಯಂತ ಹತ್ತಿರವಿರುವವನು ಆಗಿದ್ದಾನೆ. ಅಲ್ಲಾಹನೇ ಯಶಸ್ಸನ್ನು ನೀಡುವವನು. ಅವನೇ ನಮಗೆ ಸಾಕು. ಅವನು ಅತ್ಯಂತ ಶ್ರೇಷ್ಠ ಕಾರ್ಯನಿರ್ವಾಹಕನಾಗಿದ್ದಾನೆ. ಅವನ ಹೊರತು ಬೇರೆ ಯಾವುದೇ ಶಕ್ತಿ ಅಥವಾ ಸಾಮರ್ಥ್ಯವಿಲ್ಲ. ಅಲ್ಲಾಹನ ಶಾಂತಿ ಮತ್ತು ಶುಭಾಶೀರ್ವಾದಗಳು ಅವನ ದಾಸರು ಮತ್ತು ಸಂದೇಶವಾಹಕರಾದ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಕುಟುಂಬ ಮತ್ತು ಸಹಚರರ ಮೇಲೆ ಇರಲಿ.

 

 

***

 

 

kn397v4.0 - 16/02/2026


ಬುಖಾರಿ (2856) ಮತ್ತು ಮುಸ್ಲಿಂ (30).

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (735) ರಲ್ಲಿ ಮತ್ತು ಇಬ್ನ್ ಅಬ್ದುಲ್-ಬರ್‍ರ್ 'ಜಾಮಿಉಲ್ ಇಲ್ಮಿ ವ ಫದ್‌ಲಿಹಿ' (1801) ರಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅದರಲ್ಲಿ ಕುರ್‌ಆನ್ ವಚನಗಳ ಬದಲು ಹದೀಸ್‌ಗಳ ಪ್ರಸ್ತಾಪವಿದೆ. ಅದರಲ್ಲಿರುವ ವಾಕ್ಯವು ಹೀಗಿದೆ: "ಈ ಹದೀಸ್‌ಗಳು ಬಂದಂತೆಯೇ ಅವುಗಳನ್ನು ವರದಿ ಮಾಡಿ ಮತ್ತು ಅವುಗಳ ಬಗ್ಗೆ ತರ್ಕ ಮಾಡಬೇಡಿ."

ಇದನ್ನು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (865) ರಲ್ಲಿ ಉಲ್ಲೇಖಿಸಿದ್ದಾರೆ. ಇದರ ಸನದ್ ಅನ್ನು ಇಬ್ನ್ ತೈಮಿಯ್ಯ 'ಅಲ್-ಹಮವಿಯ್ಯ' (ಪುಟ: 269) ರಲ್ಲಿ ಸಹೀಹ್ ಎಂದು ಹೇಳಿದ್ದಾರೆ. ಅಝ್ಝಹಬಿ 'ಅಲ್-ಅರ್ದ್' (2/223) ರಲ್ಲಿ ಇದರ ವರದಿಗಾರರು ವಿಶ್ವಾಸಾರ್ಹ ಇಮಾಮ್‌ಗಳು ಎಂದು ಹೇಳಿದ್ದಾರೆ.

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (930) ರಲ್ಲಿ ಮತ್ತು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (955) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (665) ರಲ್ಲಿ ಮತ್ತು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (868) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (664) ರಲ್ಲಿ, ಅಬೂ ನುಐಮ್ 'ಹಿಲ್ಯತುಲ್ ಔಲಿಯಾ' (325/6) ರಲ್ಲಿ, ಮತ್ತು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (867) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಲ್-ಮುಝಕ್ಕಿ 'ಅಲ್-ಮುಝಕ್ಕಿಯಾತ್' (29) ರಲ್ಲಿ, ಇಬ್ನ್ ಬತ್ತಾ 'ಅಲ್-ಇಬಾನಾ' (120) ರಲ್ಲಿ, ಮತ್ತು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (663) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅದ್ದಾರಿಮಿ ಅವರು 'ಅರ್‍ರದ್ದ್ ಅಲಲ್-ಜಹ್ಮಿಯ್ಯ' (67) ರಲ್ಲಿ ಮತ್ತು ಅಲ್-ಬೈಹಕಿ ಅವರು 'ಅಲ್-ಅಸ್ಮಾ ವಸ್ಸಿಫಾತ್' (903) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಝ್ಝಹಬಿ 'ಅಲ್-ಉಲುವ್ವ್' (464) ರಲ್ಲಿ ಉಲ್ಲೇಖಿಸಿದ್ದಾರೆ. ಅಲ್-ಅಲ್ಬಾನಿ 'ಮುಖ್ತಸರುಲ್-ಉಲುವ್ವ್' (ಪುಟ: 184) ರಲ್ಲಿ, ಇದು ಸನದ್ ಸಹೀಹ್ ಆಗಿದೆ, ಇದರ ವರದಿಗಾರರು ವಿಶ್ವಾಸಾರ್ಹರು ಮತ್ತು ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ತಫ್ಸೀರ್ ಇಬ್ನ್ ಕಸೀರ್ (3/426, 427).

ಇದನ್ನು ಬುಖಾರಿ (22) ಯವರು ಅಬೂ ಸಈದ್ ಖುದ್ರಿ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಮುಸ್ಲಿಂ (2996) ಆಯಿಷಾ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಬುಖಾರಿ (3651) ಮತ್ತು ಮುಸ್ಲಿಂ (2533) ಅಬ್ದುಲ್ಲಾ ಬಿನ್ ಮಸ್ಊದ್ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಮುಸ್ಲಿಂ (1920) ಸೌಬಾನ್ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಇಬ್ನ್ ಮಾಜ (3952) ಸೌಬಾನ್ (ರ) ರಿಂದ ವರದಿ ಮಾಡಿದ್ದಾರೆ. ಇಬ್ನ್ ಹಿಬ್ಬಾನ್ (6714) ಮತ್ತು ಅಲ್-ಹಾಕಿಮ್ (8653) ಇದನ್ನು ಸಹೀಹ್ ಎಂದು ಹೇಳಿದ್ದಾರೆ.

ಇದನ್ನು ತಿರ್ಮಿಝಿ (2641) ಅಬ್ದುಲ್ಲಾ ಬಿನ್ ಅಮ್ರ್ (ರ) ರಿಂದ ವರದಿ ಮಾಡಿದ್ದಾರೆ. ಅಲ್-ಮುನಾವಿ 'ಫೈಝುಲ್ ಕದೀರ್' (5/347) ರಲ್ಲಿ ಹೇಳಿದ್ದಾರೆ: "ಇದರಲ್ಲಿ ಅಬ್ದುರ್‍ರಹ್ಮಾನ್ ಬಿನ್ ಝಿಯಾದ್ ಅಲ್-ಅಫ್ರಿಕಿ ಇದ್ದಾರೆ. ಹದೀಸ್ ವಿದ್ವಾಂಸರು ಅವರನ್ನು ದುರ್ಬಲರೆಂದು ಪರಿಗಣಿಸಿದ್ದಾರೆ ಎಂದು ಝಹಬಿ ಹೇಳಿದ್ದಾರೆ." ಅಲ್ಬಾನಿ 'ಸಹೀಹುಲ್-ಜಾಮಿಅ್' (5343) ರಲ್ಲಿ ಇದನ್ನು ಸಹೀಹ್ ಎಂದು ಹೇಳಿದ್ದಾರೆ.

ಮುಸ್ಲಿಂ (8).